ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಫಿಕ್ಸ್
ಟಾಪ್ ಮೋಸ್ಟ್ ಡೈರೆಕ್ಷರ್ ಗಳಲ್ಲಿ ಒಬ್ಬರಾದ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ. ಪ್ರತಿ ಬಾರಿ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸೋ ಉಪ್ಪಿ ಈ ಭಾರಿಯೂ ಅದೇ ಟ್ರಿಕ್ಸ್ ಪ್ಲೇ ಮಾಡಿದ್ದಾರೆ. ಸದ್ಯ ಉಪ್ಪಿ ರಿವಿಲ್ ಮಾಡಿರೋ ಟೈಟಲ್ ನೋಡಿ ಎಲ್ಲರೂ ಯಾರು? ಯಾರಿಗೆ? ಪಂಗನಾಮ ಹಾಕ್ತಾರೆ ಅಂತಿದ್ದಾರೆ.
ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಉಪ್ಪಿ ನಿರ್ದೇಶನದ ಪ್ರಾಜೆಕ್ಟ್ ಕಿಕ್ಸ್ಟಾರ್ಟ್ ಆಗಲಿದೆ. ಉಪ್ಪಿ ಡೈರೆಕ್ಟರ್ ಕ್ಯಾಪ್ ಯಾವಾಗ ಹಾಕೋತಾರೆ ಅಂತ ಕಾದಿದ್ದವ್ರಿಗೆ ಇದೊಂದು ಗುಡ್ ನ್ಯೂಸ್ ಆಗಿದ್ದು ಸದ್ಯ ಉಪ್ಪಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿರ್ತಾರೆ ಅನ್ನೋದೇ ಕುತೂಹಲ.
ಬಹುಭಾಷಾ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ ಟೈಟಲ್ ಸಂಚಲನ ಮೂಡಿಸಿದೆ. ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ಬ್ಯಾಂಕ್ರೋಲ್ ಮಾಡಿದೆ.
ಉಪ್ಪಿ ನಿರ್ದೇಶನ ಮಾಡ್ತಿರೋ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗಲಿದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್ ನಲ್ಲಿಯೂ ಹೆಚ್ಚೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ ಉಪ್ಪಿ…ಇನ್ನು ಸಿನಿಮಾವನ್ನ . ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವ್ರ ಪಾಲಿನ ಲಕ್ಕಿ ದೇವಸ್ಥಾನವಾದ ಬಂಡಿ ಮಹಾಕಾಳಿ ದೇವಾಲಯದಲ್ಲಿಯೇ ಈ ಚಿತ್ರದ ಮಹೂರ್ತವೂ ನಡೆಯಲಿದೆ.