# Tags

ರಾತ್ರಿ ಡ್ರಾಮಾ ಬಳಿಕ ಡಿಕೆಶಿಯ ಹಸ್ತಕ್ಷೇಪ ಜಾಲಿವುಡ್‌ ಸೀಲ್ ತೆರವು, ಬಿಗ್‌ಬಾಸ್‌ ಪುನರಾರಂಭ

ಬಿಗ್‌ಬಾಸ್‌ ಮನೆಗೆ ಬೀಗ ಬಿದ್ದ ಸುದ್ದಿ ಕನ್ನಡ ಮನರಂಜನಾ ವಲಯವನ್ನೇ ಶಾಕ್ ಮಾಡಿತ್ತು. ಆದರೆ ‘ವೈಲ್ಡ್ ಕಾರ್ಡ್ ಎಂಟ್ರಿ’ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ತಮ್ಮ ಸ್ಟೈಲ್‌ನಲ್ಲೇ ಸೀಲ್ ತೆರವು ಮಾಡಿಸಿ ಶೋಗೆ ಮತ್ತೆ ಜೀವ ತುಂಬಿದ್ದಾರೆ! ಜಾಲಿವುಡ್‌ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್‌ ಕನ್ನಡ ಸೀಸನ್ 12 ಚಿತ್ರೀಕರಣ ಪರಿಸರ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸ್ಥಗಿತಗೊಂಡಿತ್ತು. ರಾಮನಗರ ಜಿಲ್ಲಾಡಳಿತದ ಆದೇಶದಂತೆ ಸ್ಟುಡಿಯೋಗೆ ಬೀಗ ಬಿದ್ದ ಕಾರಣದಿಂದ ಬಿಗ್‌ಬಾಸ್‌ ಮನೆಗೂ ಬೀಗ […]

ರೆಸಾರ್ಟ್‌ನಲ್ಲೂ ಬಿಗ್ ಬಾಸ್ ಶೋ! ಸ್ಪರ್ಧಿಗಳಿಗೆ ಕಠಿಣ ನಿಯಮಗಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಥಗಿತಗೊಂಡ ನಂತರ, ಎಲ್ಲ ಸ್ಪರ್ಧಿಗಳನ್ನು ರಾಮನಗರದ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ವಿಶ್ರಾಂತಿ ಅಲ್ಲ — ಬಿಗ್ ಬಾಸ್ ಶೈಲಿಯ ಶಿಸ್ತಿನ ಬದುಕೇ ಮುಂದುವರಿಯುತ್ತಿದೆ! ರೆಸಾರ್ಟ್‌ನಲ್ಲಿಯೂ ಸ್ಪರ್ಧಿಗಳಿಗೆ ಬಿಗ್ ಬಾಸ್ ನಿಯಮಗಳನ್ನೇ ಹೇರಲಾಗಿದ್ದು, ಅಲ್ಲಿ ಕೂಡಾ ‘ಮಿನಿ ಬಿಗ್ ಬಾಸ್ ಶೋ’ ನಡೆಯುತ್ತಿದೆ ಎಂದು ಹೇಳಬಹುದು. ಮಾಲಿನ್ಯ ನಿಯಮ ಉಲ್ಲಂಘನೆಯ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ನಂತರ, 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿಗೆ ಹಂಚಿ ಇರಿಸಲಾಗಿದೆ. ಪ್ರತಿ […]

ಬಿಗ್ ಬಾಸ್ ಮನೆ ಖಾಲಿ ಮಾಡಿದ ಸ್ಪರ್ಧಿಗಳು; ಮುಂದಿನ ನಡೆ ಏನು?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಪ್ರತೀಕ್ಷಿತವಾಗಿ ಸ್ಥಗಿತಗೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ದೊರಕದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಆಡಳಿತಾಧಿಕಾರಿಗಳು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಈ ಸೀಸನ್ ಈಗ ತಾತ್ಕಾಲಿಕವಾಗಿ ನಿಂತು ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾಕ್ರೋಚ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ […]

ಪರಿಸರ ಉಲ್ಲಂಘನೆ ಆರೋಪ: ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ, ಬಿಗ್ ಬಾಸ್ ಸ್ಥಗಿತದ ಸೂಚನೆ!

ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಭಾರೀ ಸಂಕಷ್ಟ ಎದುರಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಮತ್ತು ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಬೀಗ ಹಾಕಿದ್ದಾರೆ. ಕಾರಣ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ಶೋ ನಡೆಯುತ್ತಿರುವುದು. ಸ್ಟುಡಿಯೋ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ. ಅಧಿಕाऱಿಗಳು ತಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಕ್ರಮಗಳು ಸರಿಯಾದ ರೀತಿಯಲ್ಲಿ ಅನುಸರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ಸ್ಟುಡಿಯೋಗೆ ತಾತ್ಕಾಲಿಕ ಬೀಗ […]

ಜಾಹ್ನವಿ ಬಳಸಿದ ಒಂದು ಪದದಿಂದ ರಣರಂಗವಾದ ಬಿಗ್ ಬಾಸ್ ಮನೆ!

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನಿಜವಾಗಿಯೂ ‘ಡ್ರಾಮಾ ಹೌಸ್’ ಆಗಿದೆ! ದೊಡ್ಮನೆಯಲ್ಲಿ ನಡೆದ ಒಂದು ಸಣ್ಣ ಮಾತಿನ ಜಗಳ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಸ್ಪರ್ಧಿ ಜಾಹ್ನವಿ ಮಾತಿನ ಭರದಲ್ಲಿ “ಗಾಂಚಲಿ” ಎಂಬ ಪದವನ್ನು ಬಳಸಿದಂತೆಯೇ ಮನೆ ಪೂರ್ತಿ ಸಿಡಿಲು ಬಡಿದಂತಾಗಿದೆ. ಆ ಪದ ಕೇಳಿದ ಜಂಟಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಕ್ಷಣಾರ್ಧದಲ್ಲಿ ಗರಂ ಆಯಿತು. ಆಟದ ಮಧ್ಯೆ ಈಗ ಜಗಳದ ಜ್ವಾಲೆ ಉರಿಯುತ್ತಿದೆ. ಜಂಟಿಗಳು ಮತ್ತು ಒಂಟಿಗಳ ನಡುವೆ ಈಗಾಗಲೇ […]

ಜಾಹ್ನವಿಯ ‘ಸಿಂಪಥಿ’ ಡ್ರಾಮಾ? ಮಾಜಿ ಪತಿ ಕಾರ್ತಿಕ್ ಕೆಂಡಾಮಂಡಲ – “ನನ್ನ ಕೆಲಸ ಹೋದಾಗ ಆಕೆ ಬದಲಾಗಿದ್ಲು!

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ರಿಯಾಲಿಟಿ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಬಿಚ್ಚಿಟ್ಟ ಮಾತುಗಳು ಈಗ ಹೊಸ ವಿವಾದಕ್ಕೆ ಕಾರಣವಾಗಿವೆ. ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರೇ ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿ, “ಸಿಂಪಥಿ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಎಂದು ಕಿಡಿಕಾರಿದ್ದಾರೆ. ಕಾರ್ತಿಕ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, “ಮದುವೆಯಾದ ಮೊದಲಿನ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲಸ ಹೋದ ಬಳಿಕ ಆಕೆಯ […]

ಬಿಗ್ಬಾಸ್ ಕನ್ನಡ 12: ಮೊದಲ ವಾರದಲ್ಲೇ ಡಬಲ್ ಎಲಿಮಿನೇಷನ್ ಶಾಕ್!

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಕೇವಲ ಒಂದು ವಾರವಾದರೂ ಈಗಾಗಲೇ ಮನೆಯೊಳಗೆ ಭಾರಿ ಡ್ರಾಮಾ, ಎಮೋಷನ್ ಮತ್ತು ಟ್ವಿಸ್ಟ್‌ಗಳು ಕಾಣಿಸುತ್ತಿವೆ. ಶೋ ಪ್ರಾರಂಭವಾದ ಮೊದಲ 24 ಗಂಟೆಗಳಲ್ಲಿಯೇ ಸ್ಪರ್ಧಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಎಲ್ಲರಿಗೂ ಶಾಕ್ ನೀಡಿದ್ದರು. ಈಗ ಮತ್ತೊಂದು ಅಚ್ಚರಿ – ಈ ಸೀಸನ್‌ನ ಮೊದಲ ಅಧಿಕೃತ ಎಲಿಮಿನೇಷನ್‌ನಲ್ಲಿ ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಮನೆಯಿಂದ ಹೊರಬಿದ್ದಿದ್ದಾರೆ! ಸಾಮಾನ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಅಂತಿಮ ಹಂತಗಳಲ್ಲಿ […]

‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿನ ಸಂಭಾಷಣೆಗಳಲ್ಲಿ ಹೊಸ ವಿವಾದ ಹುಟ್ಟಿದೆ. ಜಾನ್ವಿ ಮತ್ತು ಅಭಿಷೇಕ್ ನಡುವಿನ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಷೇಕ್ ಅವರು ಮಾತಿನ ನಡುವೆ “ನನಗೆ ದೊಡ್ಡವರು ಇಷ್ಟ” ಎಂದಾಗ, ಜಾನ್ವಿ ತಕ್ಷಣ ಪ್ರತಿಕ್ರಿಯಿಸಿ – “ನೀವು ಆಂಟಿ ಲವರ್ ಆ?” ಎಂದು ಕೇಳಿದರು. ಈ ನೇರ ಪ್ರಶ್ನೆ ಕೇಳುತ್ತಿದ್ದಂತೆಯೇ ಮನೆಯವರ ಮುಖದಲ್ಲೇ ನಗು ಮೂಡಿತು. ಆದರೆ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ […]

ಬಿಗ್ ಬಾಸ್ ನಾಮಿನೇಷನ್ ಡ್ರಾಮಾ ತೀವ್ರತೆಗೇರಿದೆ – ಮೊದಲ ಎಲಿಮಿನೇಷನ್ ಯಾರದು?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭವಾದ ಕೆಲವೇ ದಿನಗಳಲ್ಲಿ ಆಟದ ಉತ್ಸಾಹ ಉನ್ನತಕ್ಕೇರಿದೆ. ಒಂಟಿಗಳು ಮತ್ತು ಜಂಟಿಗಳು ಎಂಬ ವಿಶಿಷ್ಟ ಕಾನ್ಸೆಪ್ಟ್‌ನಲ್ಲಿ ನಡೆದಿರುವ ಈ ಸೀಸನ್‌ನಲ್ಲಿ ಈಗಾಗಲೇ ಪೈಪೋಟಿ ತೀವ್ರವಾಗಿದೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು ಎಂಟು ಮಂದಿ ಸ್ಪರ್ಧಿಗಳು ಡೇಂಜರ್ ಝೋನ್‌ಗೆ ತಲುಪಿದ್ದಾರೆ. ಈ ಪಟ್ಟಿಯಲ್ಲಿ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್, ಧನುಶ್ ಮತ್ತು ಸುಧಿ ಇದ್ದಾರೆ. ಇವರಲ್ಲಿ ಒಬ್ಬರಿಗೆ ಮೊದಲ ವಾರದಲ್ಲೇ ಬಿಗ್ ಬಾಸ್ […]

‘ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ’ ಕಾಕ್ರೋಚ್ ಸುಧಿಯ ಸ್ಪಷ್ಟನೆ

ಸುಧಿ ಅವರು ಬಿಗ್ ಬಾಸ್ಗೆ ಬರುತ್ತಾರೆ ಎಂಬ ಸುದ್ದಿ ಮೊದಲೇ ಹರಿದಾಡಿತ್ತು. ಈ ಬಗ್ಗೆ ಹಲವು ಸಂದರ್ಶನಗಳಲ್ಲಿಯೂ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ, ಸಿನಿಮಾ ಕಮಿಟ್ಮೆಂಟ್ ಹೆಚ್ಚಿರುವುದರಿಂದ “ನಾನಂತೂ ದೊಡ್ಮನೆಗೆ ಹೋಗಲ್ಲ” ಎಂದು ಅವರು ನೇರವಾಗಿ ತಿಳಿಸಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಆದರೆ ಈಗ, “ಬರಲ್ಲ, ಬರಲ್ಲ” ಎಂಬ ಮಾತುಗಳನ್ನು ಮರೆತು, ಸುಧಿ ದೊಡ್ಮನೆಗೆ ತೆರಳಿದ್ದಾರೆ. ಬಿಗ್ ಬಾಸ್ ವೇದಿಕೆ ಏರಿದ ಬಳಿಕ, ಕಾಕ್ರೋಚ್ ಸುಧಿ ತಮ್ಮ ಪ್ರವೇಶದ ಹಿಂದಿನ ಕಾರಣವನ್ನು ಹಂಚಿಕೊಂಡರು:“ನಿಮ್ಮ ಜೊತೆ ಕೆಲಸ […]

Translate »