ದೆವ್ವದ ನಾಟಕವಾಡಿ ಕಾವೇರಿಯ ಬೆವಳಿಸುತ್ತಿದ್ದಾಳೆ ಲಕ್ಷ್ಮೀ..!
ಇಷ್ಟು ದಿನ ಲಕ್ಷ್ಮೀಬಾರಮ್ಮ ಧಾರಾವಾಹಿ ನೋಡುತ್ತಿದ್ದವರಿಗೆ ನಿಜಕ್ಕೂ ಲಕ್ಷ್ಮೀ ಮೇಲೆ ಕೀರ್ತಿ ಆತ್ಮ ಬರುತ್ತಿದೆ ಎಂಬ ಅನುಮಾನವೇ ಇತ್ತು. ಆದರೆ ಕೀರ್ತಿ ಸಾವಿನ ಸತ್ಯ ತಿಳಿದುಕೊಳ್ಳುವುದಕ್ಕಾಗಿ ಲಕ್ಷ್ಮೀ ಮಾಡುತ್ತಿರುವ ನಾಟಕವಿದು ಎಂಬುದು ನಿನ್ನೆಯ ಎಪಿಸೋಡಿನಲ್ಲಿ ಅರ್ಥವಾಗಿದೆ. ಕೀರ್ತಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಕಾರುಣ್ಯ ಒಂದು ಸತ್ಯವನ್ನು ಹೇಳಿದ್ದಾಳೆ. ಕೀರ್ತಿಯ ಸಾವಿಗೆ ಕಾವೇರಿಯೇ ಕಾರಣ. ಕೀರ್ತಿಯ ರೂಮಿನಲ್ಲಿ ಒಂದು ಡೈರಿ ಇದೆ ಅದನ್ನು ಓದಿದರೆ ನಿನಗೆ ಎಲ್ಲವೂ ಅರ್ಥವಾಗುತ್ತೆ ಅಂತ. ಕೀರ್ತಿಯ ಸಾವಿನ ಹಿಂದಿನ ಸತ್ಯ ತಿಳಿದುಕೊಳ್ಳಬೇಕು ಅಂದ್ರೆ […]