ಬೆಂಗಳೂರು: ಸುದೀಪ್ ಹಾಗೂ ದೇವಗನ್ ಟ್ವೀಟ್ ವಾರ್ಗೆ ಸಂಬಂಧಿಸಿದಂತೆ ಕಿಚ್ಚನ ಬೆಂಬಲಕ್ಕೆ ಕನ್ನಡಿಗರು ನಿಂತಿದ್ದಾರೆ. ಪಾಲಿಟಿಕ್ಸ್ನಿಂದ ಟಾಲಿವುಡ್ವರೆಗೂ ಸಾಥ್ ಸಿಕ್ಕಿದ್ದು ಇದೀಗ ಕಿಚ್ಚನ ಕಿಚ್ಚಿಗೆ ಕಿರಿಕ್ ಕೀರ್ತಿ ದನಿಗೂಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಚೆನ್ನಾಗಿ ಕೊಟ್ಟಿದ್ದೀರಿ ಸರ್.. ನೀವು ಹೇಳಿದ್ದು ನಿಜ, ಅಲಹಾಬಾದ್ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ, ಹಿಂದಿ ರಾಷ್ಟ್ರಭಾಷೆ ಅಲ್ಲ, ಅವರು ಮಾಡ್ತಿರೋದು ಒಂದು ರೀತಿಯ ನ್ಯಾಯಾಂಗ ನಿಂದನೆ ಎಂದು ನಟ ಸುದೀಪ್ ಮಾತಿಗೆ ನಟ ಕಿರಿಕ್ ಕೀರ್ತಿ ಬೆಂಬಲ ನೀಡಿದ್ದಾರೆ.
