Sandalwood Leading OnlineMedia

`ಶ್ರೀಮಂತ’ ಮೂಲಕ ಕನ್ನಡಕ್ಕೆ ಸೋನುಸೂದ್

 

ಇಡೀ ದೇಶಕ್ಕೆ ಬೆನ್ನೆಲುಬಾಗಿರು ವವನೇ ರೈತ. ನಾವು ಎಷ್ಟೇ ಆಧುನಿಕವಾಗಿ ಮುಂದುವರಿದರು ರೈತನ ಕೊಡುಗೆ ನಮ್ಮೆಲ್ಲರಿಗೂ ಬಹಳ ಮುಖ್ಯ. ಇಂಥ ಕಥಾಹಂದರ ವನ್ನು ಒಳಗೊಂಡಿರುವ ರೈತನ ಕುರಿತಾದ ಬದುಕು, ಬವಣೆಳೊಂದಿಗೆ ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು, ಜತೆಗೆ ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲಾ ಅಂಶಗಳನ್ನು ಬೆಸೆದುಕೊಂಡು ತೆರೆಮೇಲೆ ಬರಲು ಸಿದ್ಧವಾಗುತ್ತಿರುವ ಚಿತ್ರವೇ “ಶ್ರೀಮಂತ”.ಗೋಲ್ಡನ್ ರೈನ್ ಮೂವೀಸ್ ಮೂಲಕ ಜಿ .ನಾರಾಯಣಪ್ಪ ವಿ. ಸಂಜಯ್ ಬಾಬು ಹಾಗೂ ಹಾಸನ್ ರಮೇಶ್ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರುವ ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವೀಡಿಯೋ ಹಾಡೊಂದನ್ನ ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಯುವ ರೈತ ಮುಖಂಡರಾದ ಸಂತೋಷ್ ಹಾಗೂ ಚಿರಂತ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿದರು. ಹಾಗೆಯೇ ರೈತನ ಕುರಿತಾದ ಹಾಡು ‘ ಮಳೆ ಮುನಿದರೆ ಸಂತ.. ಜನಪದ ಸಂತ.. ಜನಪದ ಸಂತ… ಎಂಬ ಹಾಡನ್ನು ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಹೊರಬಂದಿದ್ದು, ಇದು ಇವರ ಕೊನೆ ಹಾಡಾಗಿದ್ದು ಈ ಹಾಡನ್ನ ನಾದಬ್ರಹ್ಮ ಹಂಸಲೇಖ ಹಾಗೂ ನಿರ್ಮಾಪಕರಾದ ಜಿ. ನಾರಣಪ್ಪನವರು ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಈ ಹಾಡಿನ ಬಗ್ಗೆ ಚಿತ್ರೋದ್ಯಮದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಹಾಡನ್ನು ವೀಕ್ಷಿಸಿ ಮಾತನಾಡಿದ ವಿಡಿಯೋವನ್ನ ಪರದೆ ಮೇಲೆ ಪ್ರದರ್ಶಿಸಲಾಯಿತು.

`ಕಾಂತಾರ’ದ ಕಾತುರತೆಗೆ ನಾಳೆ ತೆರೆ

ಈ ಕಾರ್ಯಕ್ರಮದ ಕೇಂದ್ರಬಿಂದು ಡಾ. ಹಂಸಲೇಖ ರೈತ ಗೀತೆಯನ್ನು ಬಿಡುಗಡೆ ಮಾಡುತ್ತಾ ಈ ಸುಸಂದರ್ಭ ಎಂದೂ ಮರೆಯಲಾಗದ ದಿನವಾಗಿದೆ ನನಗೆ ಎಂದು ಭಾವನಾತ್ಮಕವಾಗಿ ಮಾತನಾಡುತ್ತಾ ಇಡೀ ಸಭಾಂಗಣಕ್ಕೆ ದೊಡ್ಡ ಕಳೆ ಬಂದಂತೆ ಕಾಣುತ್ತಿದೆ. ಈ ರೈತಗೀತೆಯ ಹಾಡು ಬಹಳ ಸೊಗಸಾಗಿ ಬಂದಿದೆ ಹಾಗೂ ಈ ಹಾಡಿನ ಕ್ವಾಲಿಟಿ ಕೂಡ ಅದ್ಭುತವಾಗಿ ಪರದೆಯ ಮೇಲೆ ಮೂಡಿದೆ. ಈ ಸಭಾಂಗಣಕ್ಕೆ ಬರುತ್ತಿದ್ದಂತೆ ನಾನು ನನ್ನ ದೇವರು ಎಸ್ಪಿಬಿಗೆ ಕೈಮುಗಿದೆ. ಹಾಗೆ ಅಪ್ಪು ಗೂ ನಾನು ಕೈಮುಗಿದೆ… ಅವರು ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಸಾಧನೆ ಅಪಾರ.ಅಪ್ಪು ಇಲ್ಲದ ಜಾಗ ಇಲ್ಲವೇ ಇಲ್ಲ. ಯಾಕೆಂದರೆ ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಕಾರ್ಯ ಎಲ್ಲೇ ಹೋದರೂ ಅಪ್ಪು ಫೋಟೋ ಇಲ್ಲದ ಜಾಗವಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಇಂಥ ಮಹಾನ್ ಸಾಧನೆ ಮಾಡಿ ಎಲ್ಲರ ಮನಸ್ಸಿನ ಭಗವಂತನಾಗಿದ್ದಾನೆ ಅಪ್ಪು ಎಂದು ಗುಣಗಾನ ಮಾಡಿದರು. ಹಾಗೆಯೇ ಅವರ ನೆಚ್ಚಿನ ದೇವರು ಆದ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡುತ್ತಾ ಬಹುತೇಕ ಎಲ್ಲಾ ಭಾಷೆಯಲ್ಲೂ ಹಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ, ಪ್ರೀತಿ, ವಿಶ್ವಾಸವನ್ನು ಗಳಿಸಿದ ನನ್ನ ದೇವರು ಹಾಡಿದ ಕೊನೆಯ ಹಾಡು ಈ ರೈತ ಗೀತೆ.

 

‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

 

ನನ್ನ ಜೀವನದ ಮರೆಯಲಾಗದ ಹಾಡು ಇದಾಗಲಿದೆ. ಎಸ್.ಪಿ.ಬಿ ೫೦ ವರ್ಷಗಳಲ್ಲಿ ಎಲ್ಲಾ ಭಾಷೆಯಲ್ಲಿ ಹಾಡಿದ್ದಾರೆ. ಅಪ್ಪು ಕೂಡ ೪೫ ವರ್ಷದಲ್ಲೇ ಮನೆ ಮನೆಗೆ ಹೋಗಿದ್ದಾನೆ. ೮೦ ವರ್ಷದ ಕನ್ನಡ ಚಿತ್ರರಂಗವನ್ನು ರೈತ ಸಮುದಾಯ ಕಾಯ್ದಿದೆ. ಇಂದಿನ ಹೀರೋಗಳು ನೀವು ಜನಪದ ಕಥೆ ಇಟ್ಟು ಸಿನಿಮಾ ಮಾಡಿ ಅದರಲ್ಲಿ ರೈತ ಇರತಾನೆ. ನೀವು ಮುಂದಾದರೆ ನಾನು ಕೂಡ ನಿಮ್ಮ ಜೊತೆ ನಿರ್ಮಾಣದಲ್ಲಿ ನಾನು ಸಾಥ್ ನೀಡುತ್ತೇನೆ. ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಆಗಿದೆ. ನಮ್ಮ ಸಂಸ್ಕೃತಿ ನಮ್ಮ ನುಡಿ ಭಾಷೆ ಮುಖ್ಯ ಎನ್ನುತ್ತಾ, ನಿರ್ದೇಶಕ ಹಾಸನ್ ರಮೇಶ್ ಸುಮಾರು ೫ ವರ್ಷದ ಹಿಂದೆ ಕಥೆ ಇಟ್ಟುಕೊಂಡು ಬಂದ ಚಿತ್ರಕಥೆಯನ್ನ ಹೇಳುವ ಮೂಲಕ ಇವನು ಎಷ್ಟು ಗಟ್ಟಿ ಎಂದು ತಿಳಿಯಿತು. ಹಾಗೆಯೇ ಅದಕ್ಕೆ ಪೂರಕವಾಗಿ ಸಂಗೀತವನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇನೆ. ಈಗ ಚಿತ್ರದ ಹಾಡುಗಳು ಬಹಳ ಸೊಗಸಾಗಿ ಬಂದಿದೆ. ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಜಿ. ನಾರಣಪ್ಪನವರು ಎಸ್ಪಿಬಿ ಅವರ ಕೈಯಲ್ಲಿ ರೈತಗೀತೆ ಆಡಿಸಬೇಕೆಂದು ಕೇಳಿಕೊಂಡರು. ಅದರಂತೆ ಹಾಡನ್ನ ಅವರ ಬಳಿಯ ಹಾಡಿಸಿ ಹಾಡು ತುಂಬಾ ಸೊಗಸಾಗಿ ಬಂದಿದೆ. ಒಟ್ಟಾರೆ ಹೇಳಬೇಕೆಂದರೆ ಎಲ್ಲರ ಶ್ರಮದ ಫಲವಾಗಿ ಈ “ಶ್ರೀಮಂತ” ಚಿತ್ರವು ಶ್ರೀಮಂತವಾಗಿ ಬಂದಿದೆ. ಈ ಚಿತ್ರಕ್ಕೆ ಹೆಚ್ಚು ಪ್ರಚಾರ ಕೊಟ್ಟು ಎಲ್ಲರೂ ಬಂದು ಚಿತ್ರವನ್ನು ನೋಡಿರಿ ಯಶಸ್ವಿಗೊಳಿಸಿ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ನಾನು ಕೂಡ ಈ ಚಿತ್ರವನ್ನ ಮೊದಲ ದಿನವೇ ಚಿತ್ರಮಂದಿರದಲ್ಲೇ ನೋಡುತ್ತೇನೆ ಎಂದು ಶುಭ ಹಾರೈಸಿದರು.

ಅತೀ ಶೀಘ್ರದಲ್ಲೇ ಬರಲಿದೆ ‘ಕಥಾಲೇಖನ’

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಾ.ಮಾ. ಹರೀಶ್ ಮಾತನಾಡುತ್ತಾ ರೈತ ಸಮುದಾಯದ ಬಗ್ಗೆ ಉತ್ತಮ ಚಿತ್ರ ಮಾಡಿದ್ದಾರೆ. ಹಾಡು ತುಂಬ ಸೊಗಸಾಗಿ ಮೂಡಿಬಂದಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಯಶಸ್ವಿಗೊಳಿಸಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.ಈ “ಶ್ರೀಮಂತ” ಚಿತ್ರಕ್ಕೆ ಬಾಲಿವುಡ್ ನಟ ಸೋನು ಸೂದ್ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟ್ವರ್ಧನ್ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ.ಇನ್ನು ಉಳಿದಂತೆ ಈ ಚಿತ್ರದಲ್ಲಿ ಹಿರಿಯ ನಟರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.

 

 

ಅಮೇಜಾನ್​ ಪ್ರೈಮ್​ನಲ್ಲಿ ಮಮ್ಮೂಟ್ಟಿ ಅಭಿನಯದ ಕನ್ನಡದ ‘ಶೈಲಾಕ್​’

 

ಈ ಚಿತ್ರಕ್ಕೆ ನಾದಬ್ರಹ್ಮಡಾ. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್, ನವೀನ್ ಸಜ್ಜು, ಅಜಯ್ ವಾರಿಯರ್, ರಘು, ಅಂಕಿತಾ ಕುಂಡು, ಅಮ್ರಪಾಲಿ ಮುಂತಾದವರು ಹಾಡಿದ್ದಾರೆ. ರವಿಕುಮಾರ್ ಸನಾ ಹಾಗೂ ಕೆ .ಎಂ. ವಿಷ್ಣುವರ್ಧನ್ , ಛಾಯಾಗ್ರಹಣ , ಕೆ .ಎಂ. ಪ್ರಕಾಶ್ ಸಂಕಲನ, ಪ್ರೊ. ಅರವಿಂದ ಮಾಲಗತ್ತಿ ಸಾಹಿತ್ಯ, ಮಾಸ್ ಮಾದ ಸಾಹಸ, ಮದನ್ ಹರಿಣಿ ಹಾಗೂ ಮೋಹನ್ ನೃತ್ಯ, ಪಳನಿ ಸೌಂಡ್ ಇಂಜನಿಯರ್ ಕೆಲಸ ಮಾಡಿರುವಿರುವ ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಹಾಸನ ರಮೇಶ್ ಮಾಡಿದ್ದಾರೆ.ಇನ್ನು ಈ ಕಾರ್ಯಕ್ರಮಕ್ಕೆ ನಾಯಕ ನಟ ಸೋನು ಸೂದ್ ಕಾರಣಾಂತರದಿಂದ ಬಂದಿರಲಿಲ್ಲ. ಇನ್ನು ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮರಾಠಿ ಬೆಡಗಿ
ವೈಷ್ಣವಿ ಪಟವರ್ಧನ್ ಮಾತನಾಡುತ್ತಾ ಒಳ್ಳೆ ಕಥೆ ಇದರಲ್ಲಿ ಇದೆ. ಎಲ್ಲರೂ ಖುಷಿ ಪಡುತ್ರಾರೆ ಸಿನಿಮಾ ನೋಡಿ ಎಂದರು.ರಾಜು ತಾಳಿಕೋಟೆ ಮಾತಾಡ್ತಾ ನಾನು ನಾಟಕ ಸಿನಿಮಾ ರಂಗದಲ್ಲಿ ಇದ್ದರು ಕೃಷಿಕ ಈ ಎರಡು ರಂಗದಿಂದ ೨೦ ಎಕರೆ ಭೂಮಿ ಮಾಡಿದ್ದು, ನಾನಾ ಬೆಳೆ ಬೆಳೆಯುತ್ತೇನೆ ರೈತ ಕುರಿತಾದ ಸಿನಿಮಾ ಮಾಡಿದ್ದು ಖುಷಿ ಇದೆ ಎಂದರು.

 

 

*ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್- ಮರೆಯಲಾರದ ಅನುಭವ ಎಂದ ನಿರ್ದೇಶಕ*

 

ಇನ್ನು ನಾಯಕನ ತಾಯಿಯ ಪಾತ್ರ ಮಾಡಿರುವ ಕಲ್ಯಾಣಿ ಮಾತನಾಡುತ್ತಾ ನಿರ್ದೇಶಕರ ನಾಲ್ಕು ವರ್ಷದ ಶ್ರಮ ಇಂದಿಗೆ ಮುಗಿದಿದೆ. ಇದರಲ್ಲಿ ನಾನು ತಾಯಿ ಪಾತ್ರ ಮಾಡಿದ್ದೇನೆ. ಹಾಸನದ ಭಾಷೆ ಮಾತನಾಡಿದ್ದೇನೆ ಶಾಂತಮ್ಮ ಮಾತು ಮಾತಿಗೂ ಗಾದೆಗಳನ್ನು ಹೇಳಬೇಕಾಗಿತ್ತು. ಚಾಲೆಂಜಿಂಗ್ ಆಗಿ ತೆಗೆದುಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ ಎಂದರು.
ಇನ್ನು ಯುವ ಪ್ರತಿಭೆ ಗುಲ್ಬರ್ಗದ ಹುಡುಗ ಕ್ರಾಂತಿ ಮಾತನಾಡುತ್ತಾ ಈ ಚಿತ್ರದ ಕಥೆ ಬಹಳ ಗಟ್ಟಿಯಾಗಿದೆ. ಇದು ಸಮಾಜಕ್ಕೆ ಮಾದರಿ ಚಿತ್ರವಾಗಿ ಹೊರ ಬರಲಿದೆ. ಈ ಚಿತ್ರದಲ್ಲಿ ಆ್ಯಕ್ಷನ್, ಲವ್, ಸೆಂಟಿಮೆಂಟ್ ಡ್ರಾಮಾ ಹೀಗೆ ಎಲ್ಲಾ ಇದೆ. ೫-೬ ವರ್ಷದ ಶ್ರಮ ಈ ಚಿತ್ರಕ್ಕೆ ಇದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು. ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಹಾಸನ್ ರಮೇಶ್ ಮಾತನಾಡುತ್ತಾ ಇದು ಬರೇ ರೈತರ ಸಿನಿಮಾ ಮಾತ್ರ ಅಲ್ಲ ಎಲ್ಲಾ ಅಂಶ ಒಳಗೊಂಡ ಸಿನಿಮಾ .ನಾಯಕಿ ಹಳ್ಳಿಯಲ್ಲೂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ದೇಶದಲ್ಲಿ ೮೦% ರೈತರು ಆಗಿದ್ದು ಆ ತಾಟ್ ನಲ್ಲಿ ಕಥೆ ಮಾಡಿದೆ. ಇದು ಸಂಗೀತಮಯ ಸಿನಿಮಾ. ಸಾಂಗ್ ೮ ಗೀತೆಗಳ ಜೊತೆಗೆ ಒಗಟು, ಗಾದೆಗಳು ಇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ. ಈಗ ಹಾಡು ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿಕೊಂಡರು. ಮತ್ತೊಬ್ಬ ನಿರ್ಮಾಪಕಸಂಜಯ್ ಬಾಬು ಮಾತನಾಡುತ್ತಾ ಕೊರೋನಾ ನಂತರ ನಾನು ಸಿನಿಮಾ ತಂಡ ಸೇರಿಕೊಂಡೆ. ನಿರ್ದೇಶಕರ ಶ್ರಮ ನೋಡಿ ಸಿನಿಮಾ ಮಾಡಲಾಯಿತು ಎಂದರು. ಮತ್ತೊಬ್ಬ ನಿರ್ಮಾಪಕ ಜಿ. ನಾರಾಯಣಪ್ಪ ಮಾತನಾಡುತ್ತಮೂಲತಃ ನಾನು ರೈತ ನಮ್ಮ ಕಸಬು ವ್ಯವಸಾಯ ರೈತರ ಬಗ್ಗೆ ಕಾಳಜಿ ಇದ್ದರಿಂದ ಈ ರೈತರ ಸಿನಿಮಾ ಮಾಡಿದ್ದೇನೆ. ಇಂತಹ ಸಿನಿಮಾ ಗಳನ್ನು ಹೆಚ್ಚಾಗಿ ನೋಡಬೇಕು.ನಿಮ್ಮೆಲ್ಲರ ಸಹಕಾರ ಪ್ರೀತಿ ಇರಲಿ ಎಂದು ಕೇಳಿಕೊಂಡರು. ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನಿರ್ಮಾಣವಾಗಿರುವ ಈ “ಶ್ರೀಮಂತ” ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಂಡ ನೀಡಲಿದ್ದು, ಸದ್ಯಅಣ್ಣ ಟಾಕೀಸ್ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆಯಂತೆ.

Share this post:

Translate »