ಹೊಸಬರ ಪ್ರಯತ್ನಕ್ಕೆ ಮತ್ತು ಹೊಸತನಕ್ಕೆ, ಸದಾ ಬೆಂಬಲವಾಗಿ ನಿಂತುಕೊಳ್ಳುವವರಲ್ಲಿನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಒಬ್ಬರು ಅವರು ‘ಪರಂವಃ’ ಕನ್ನಡ ಸಿನಿಮಾವನ್ನು ಮತ್ತು ಆ ಸಿನಿಮಾ ತಂಡವನ್ನು ಬೆಂಬಲಿಸಿದ್ದಾರೆ.ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆಯ ಹೆಸರು ‘ಪರಂವಃ’ ಅದೇ ಹೆಸರಿನಲ್ಲಿ ಈಗ ಕನ್ನಡದಲ್ಲಿ ಸಿನಿಮಾ ಒಂದು ನಿರ್ಮಾಣಗೊಂಡಿದ್ದು ಹೊಸಬರ ಈ ಸಿನಿಮಾಕ್ಕೆ ರಕ್ಷಿತ್ ಶೆಟ್ಟರ ಆಪ್ತ ಗೆಳೆಯ ರಾಜ್ ಬಿ ಶೆಟ್ಟಿ ಶುಭ ಹಾರೈಸಿದ್ದಾರೆ.ಹೊಸಬರ, ಹೊಸತನದ ಭರವಸೆಯ ಚಿತ್ರ ಪರಂವಃ
ಶಿವನ ಡಮರುಗದ ಮೊದಲ ಶಬ್ದ ಪರಂವಃ ,ಲೋಕದ ಸೃಷ್ಟಿಯಲ್ಲಿ ಶಿವನು ನರ್ತನೆಯನ್ನು ಮಾಡುವಾಗ ತನ್ನ ಡಮರುಗದಿಂದ ಹೊರಟಂತಹ ಮೊದಲ ಶಬ್ದ ಪರಂವಃ ಈ ಹೆಸರನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟ ಈ ಹೊಸಬರ ತಂಡ ‘ಪರಂವಃ’ ಚಿತ್ರವನ್ನು ಮಾಡಿದೆ. ಇದರ ಟ್ರೇಲರ್ ನೊಡಿದರೆ ಇದು ಹೊಸಬರ ಸಿನಿಮಾ ಎಂದು ಅನಿಸುವುದಿಲ್ಲಾ. ಇಲ್ಲಿ ಅವರ ಅನುಭವ , ಅವರ ಕಥೆಯ ಕಲ್ಪನೆಗೆ ತಕ್ಕಂತೆ ಇದೆ .ಅದೇ ರೀತಿ ತೆರೆಯ ಮೇಲೆ ಆ ಪರಂವಃ ಸಿನಿಮಾ ಚಿತ್ರಣ ಮೂಡಿ ಬಂದಿದೆ . ನಿಜಕ್ಕೂ ಅದರ ಟ್ರೇಲರ್ ನೊಡಿದರೆ ಚಿತ್ರದಲ್ಲಿ ಚಿತ್ರದಲ್ಲಿ ಏನೊ ಮಹತ್ವದ್ದು ಇದೆ ಎಂದು ಅನಿಸುತ್ತದೆ .ಅಂತಹ ದೃಶ್ಯಗಳಿವೆ , ಅಂತಹ ಢೈಲಾಗ್ಸ್ಗಳಿವೆ, ಮೊಗೆದಷ್ಟು ಹೊಸತನ, ಕಥೆಯ ಗಾಢತೆ ತುಂಬಿ ಬರುತಿದೆ. ಭ್ರಮೆ ಮತ್ತು ವಾಸ್ತವಗಳ ನಡುವೆ ಹಾದು ಹೊಗುವ ಎಳೆ ಹಿಡಿದುಕೊಂಡು.ವೀರಗಾಸೆ ಎನ್ನುವ ಮಹಾನ್ ಜನಪದ ನೃತ್ಯಕಲೆಯನ್ನು ಚಿತ್ರದ ಕಥಾವಸ್ತುವಾಗಿಟ್ಟುಕೊಂಡು, ತಂದೆ ಮಗನ ಸಂಬಂಧದಲ್ಲಿ ಪ್ರೀತಿಯನ್ನು ತಂದು ಜೊತೆಗೆ ಈ ಮಾಡ್ರನ್ ಪ್ರಪಂಚದ ಆಗು- ಹೋಗುಗಳ ಜೊತೆಗೆ, ಊರಿನ ಪರಂಪರೆಯ ಕಲೆಯ ಎಳೆಯ ತಂದು ವೀರಗಾಸೆಯ ವೀರತ್ವ ಸಾರುವ ಜಾನಪದ ಸಂಪ್ರದಾಯವನ್ನು ಕಥೆಯ ಸಾರವನ್ನಾಗಿ ಬಳಸಿಕೊಂಡು ಮೈಸೂರು ದಸರಾದಲ್ಲಿ ಪ್ರದರ್ಶನ ಕೊಡಲು ತಲೆ ತಲೆ ಮಾರುಗಳಿಂದ ಕನಸು ಕಾಣುವ ಕುಟುಂಬದಲ್ಲಿ ನಡೆಯುವ ಜೀವನ ಸಾರದ ಕಥೆ, ಈ ಕತೆಯಲ್ಲಿ ಮನುಷ್ಯನ ಪ್ರಯತ್ನ ಮತ್ತು ದೇವರ ಯತ್ನ ಎರಡರ ನಡುವೆ ಯಾರು ಮೊದಲು ಯಾರು ನಂತರ ಅನ್ನುವ ಪ್ರಶ್ನೆಗೆ ಉತ್ತರವನ್ನು ಕಲೆಯ ಮೂಲಕ ಕೊಟ್ಟಿದ್ದಾರಂತೆ, ನಿರ್ದೇಶಕರು. ಇಲ್ಲೀ ಮಾನವ ಪ್ರಯತ್ನಿಸುತ್ತಾನಾ? ಅಥವಾ ಕಲೆಯೇ ಅಂತಹವರನ್ನು ತನ್ನ ವೇದಿಕೆಗೆ ಕರೆಸಿಕೊಳ್ಳುತ್ತಾ ಅನ್ನೊದೆ ಸಿನಿಮಾ. ಆ ಕಥೆಯ ಜರ್ನಿಯೊಳಗೆ ನಾಯಕನ ಪ್ರೀತಿ ಎಜುಕೇಷನ್ ಡಿಸ್ ಅಪಾಯಿಂಟ್ಮೆಂಟ್, ವೇದನೆ ರೊಷ,ವೇಷ, ಗೆಳೆತನ, ಮೋಸ ಎಲ್ಲವೂ ತುಂಬಿದೆ. ಒಂದು ನೃತ್ಯ ಪ್ರಕಾರದಲ್ಲಿ ಎಷ್ಟು ವಿದಧ ಬದುಕಿದೆಯೊ ಅಷ್ಟನ್ನೂ ತೊರಿಸುವ ಆ ನೃತ್ಯವೇ ವೀರಗಾಸೆ. ಶಿವನು ಡಮರು ಹಿಡಿದು ಕುಣಿವ ವೀರಗಾಸೆ ಆ ವೀರಗಾಸೆ ಕುಣಿತ ಕುಣಿಯುವ ಆ ಕಲಾವಿದನ ಕಥೆಯೇ ಪರವಂಃ
ಜುಲೈ ೨೧ ರಂದು ಬಿಡುಗಡೆಯಾಗುತ್ತಿರುವ ಪರಂವಃ ಸಿನಿಮಾವನ್ನು ಸಂತೊಷ್ ಕೈದಾಳ ರವರು ನಿರ್ಧೇಶಿಸಿದ್ದಾರೆ, ತಾರಾಗಣದಲ್ಲಿ ಪ್ರೇಮ ಸಿಡೇಗಲ್ , ಮೈತ್ರಿ ಜೆ ಕಶ್ಯಪ್ , ಗಣೇಶ್ ಹೆಗ್ಗೋಡು , ನಾಜರ್ಪಿಒ ಎಸ್ .ಶೃತಿ , ಮುಕುಂದ್ ಮೈಗೂರ್ ಅವಿನಾಶ್ ಶಬರೀಶ್ ,ಸಿನಿಮಾಟೊಗ್ರಫಿ ಎ,ಎಸ್ ಶೆಟ್ಟಿ., ಹಿನ್ನೆಲೆ ಸಂಗೀತಾ ಪೂರ್ಣಚಂದ್ರ ತೇಜಸ್ವಿ, ಸಂಗೀತ -ಅಪರಿಜಿತ್, ಜಾಸ್ ಜೊಸ್ಸಿ., ಸಂಕಲನ ವೆಂಕಿ ಯು,ಢಿ ವಿ, .,ವಿಕಾಶ್ ಚಂದ್ರ., ಮತ್ತು ಚಿತ್ರದ ನಿರ್ಮಾಣವನ್ನು ಪೀಪಲ್ ವರ್ಲ್ಡ್ ಫಿಲಂಸ್ ನಿರ್ಮಿಸಿದೆ .,