Sandalwood Leading OnlineMedia

ಚಿತ್ರ ರಂಗದ ಹಿರಿಯರ, ತಂತ್ರಜ್ಞರ, ನಟರ, ನಿರ್ದೇಶಕರ, ನಿರ್ಮಾಪಕರ ಮೆಚ್ಚುಗೆಗಳಿಸಿದ ಪರಂವಃ, ಚಿತ್ರ ಮತ್ತು ಚಿತ್ರ ತಂಡ,

 

ಹೊಸಬರ ಪ್ರಯತ್ನಕ್ಕೆ ಮತ್ತು ಹೊಸತನಕ್ಕೆ, ಸದಾ ಬೆಂಬಲವಾಗಿ ನಿಂತುಕೊಳ್ಳುವವರಲ್ಲಿನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಒಬ್ಬರು ಅವರು ‘ಪರಂವಃ’ ಕನ್ನಡ ಸಿನಿಮಾವನ್ನು ಮತ್ತು ಆ  ಸಿನಿಮಾ ತಂಡವನ್ನು ಬೆಂಬಲಿಸಿದ್ದಾರೆ.ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆಯ ಹೆಸರು ‘ಪರಂವಃ’ ಅದೇ ಹೆಸರಿನಲ್ಲಿ ಈಗ ಕನ್ನಡದಲ್ಲಿ ಸಿನಿಮಾ ಒಂದು ನಿರ್ಮಾಣಗೊಂಡಿದ್ದು ಹೊಸಬರ ಈ ಸಿನಿಮಾಕ್ಕೆ ರಕ್ಷಿತ್ ಶೆಟ್ಟರ ಆಪ್ತ ಗೆಳೆಯ ರಾಜ್ ಬಿ ಶೆಟ್ಟಿ  ಶುಭ ಹಾರೈಸಿದ್ದಾರೆ.ಹೊಸಬರ, ಹೊಸತನದ ಭರವಸೆಯ ಚಿತ್ರ ಪರಂವಃ

  ಶಿವನ ಡಮರುಗದ ಮೊದಲ ಶಬ್ದ ಪರಂವಃ ,ಲೋಕದ ಸೃಷ್ಟಿಯಲ್ಲಿ ಶಿವನು ನರ್ತನೆಯನ್ನು ಮಾಡುವಾಗ ತನ್ನ ಡಮರುಗದಿಂದ ಹೊರಟಂತಹ ಮೊದಲ ಶಬ್ದ ಪರಂವಃ ಈ ಹೆಸರನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟ ಈ ಹೊಸಬರ ತಂಡ ‘ಪರಂವಃ’ ಚಿತ್ರವನ್ನು ಮಾಡಿದೆ. ಇದರ ಟ್ರೇಲರ್ ನೊಡಿದರೆ ಇದು ಹೊಸಬರ ಸಿನಿಮಾ ಎಂದು ಅನಿಸುವುದಿಲ್ಲಾ. ಇಲ್ಲಿ ಅವರ ಅನುಭವ , ಅವರ ಕಥೆಯ  ಕಲ್ಪನೆಗೆ ತಕ್ಕಂತೆ ಇದೆ .ಅದೇ ರೀತಿ  ತೆರೆಯ ಮೇಲೆ ಆ ಪರಂವಃ  ಸಿನಿಮಾ  ಚಿತ್ರಣ ಮೂಡಿ ಬಂದಿದೆ . ನಿಜಕ್ಕೂ ಅದರ ಟ್ರೇಲರ್ ನೊಡಿದರೆ ಚಿತ್ರದಲ್ಲಿ ಚಿತ್ರದಲ್ಲಿ ಏನೊ ಮಹತ್ವದ್ದು ಇದೆ ಎಂದು ಅನಿಸುತ್ತದೆ .ಅಂತಹ ದೃಶ್ಯಗಳಿವೆ , ಅಂತಹ ಢೈಲಾಗ್ಸ್ಗಳಿವೆ, ಮೊಗೆದಷ್ಟು ಹೊಸತನ, ಕಥೆಯ ಗಾಢತೆ ತುಂಬಿ ಬರುತಿದೆ. ಭ್ರಮೆ ಮತ್ತು ವಾಸ್ತವಗಳ ನಡುವೆ ಹಾದು ಹೊಗುವ ಎಳೆ ಹಿಡಿದುಕೊಂಡು.ವೀರಗಾಸೆ ಎನ್ನುವ ಮಹಾನ್ ಜನಪದ ನೃತ್ಯಕಲೆಯನ್ನು ಚಿತ್ರದ ಕಥಾವಸ್ತುವಾಗಿಟ್ಟುಕೊಂಡು, ತಂದೆ ಮಗನ ಸಂಬಂಧದಲ್ಲಿ ಪ್ರೀತಿಯನ್ನು ತಂದು ಜೊತೆಗೆ ಈ ಮಾಡ್ರನ್ ಪ್ರಪಂಚದ ಆಗು- ಹೋಗುಗಳ ಜೊತೆಗೆ, ಊರಿನ ಪರಂಪರೆಯ ಕಲೆಯ ಎಳೆಯ ತಂದು ವೀರಗಾಸೆಯ ವೀರತ್ವ ಸಾರುವ ಜಾನಪದ ಸಂಪ್ರದಾಯವನ್ನು ಕಥೆಯ ಸಾರವನ್ನಾಗಿ ಬಳಸಿಕೊಂಡು ಮೈಸೂರು ದಸರಾದಲ್ಲಿ ಪ್ರದರ್ಶನ ಕೊಡಲು ತಲೆ ತಲೆ ಮಾರುಗಳಿಂದ ಕನಸು ಕಾಣುವ ಕುಟುಂಬದಲ್ಲಿ ನಡೆಯುವ ಜೀವನ ಸಾರದ ಕಥೆ, ಈ ಕತೆಯಲ್ಲಿ ಮನುಷ್ಯನ ಪ್ರಯತ್ನ ಮತ್ತು ದೇವರ ಯತ್ನ ಎರಡರ ನಡುವೆ ಯಾರು ಮೊದಲು ಯಾರು ನಂತರ ಅನ್ನುವ ಪ್ರಶ್ನೆಗೆ ಉತ್ತರವನ್ನು ಕಲೆಯ ಮೂಲಕ ಕೊಟ್ಟಿದ್ದಾರಂತೆ, ನಿರ್ದೇಶಕರು. ಇಲ್ಲೀ ಮಾನವ ಪ್ರಯತ್ನಿಸುತ್ತಾನಾ? ಅಥವಾ ಕಲೆಯೇ ಅಂತಹವರನ್ನು ತನ್ನ ವೇದಿಕೆಗೆ ಕರೆಸಿಕೊಳ್ಳುತ್ತಾ ಅನ್ನೊದೆ ಸಿನಿಮಾ. ಆ ಕಥೆಯ ಜರ್ನಿಯೊಳಗೆ  ನಾಯಕನ ಪ್ರೀತಿ ಎಜುಕೇಷನ್ ಡಿಸ್ ಅಪಾಯಿಂಟ್‌ಮೆಂಟ್,  ವೇದನೆ ರೊಷ,ವೇಷ, ಗೆಳೆತನ, ಮೋಸ ಎಲ್ಲವೂ ತುಂಬಿದೆ. ಒಂದು ನೃತ್ಯ ಪ್ರಕಾರದಲ್ಲಿ ಎಷ್ಟು ವಿದಧ ಬದುಕಿದೆಯೊ ಅಷ್ಟನ್ನೂ ತೊರಿಸುವ ಆ ನೃತ್ಯವೇ ವೀರಗಾಸೆ.  ಶಿವನು ಡಮರು ಹಿಡಿದು ಕುಣಿವ ವೀರಗಾಸೆ ಆ ವೀರಗಾಸೆ ಕುಣಿತ ಕುಣಿಯುವ ಆ ಕಲಾವಿದನ ಕಥೆಯೇ ಪರವಂಃ

                    ಜುಲೈ ೨೧ ರಂದು ಬಿಡುಗಡೆಯಾಗುತ್ತಿರುವ ಪರಂವಃ ಸಿನಿಮಾವನ್ನು ಸಂತೊಷ್ ಕೈದಾಳ ರವರು ನಿರ್ಧೇಶಿಸಿದ್ದಾರೆ, ತಾರಾಗಣದಲ್ಲಿ ಪ್ರೇಮ ಸಿಡೇಗಲ್ , ಮೈತ್ರಿ ಜೆ ಕಶ್ಯಪ್ , ಗಣೇಶ್ ಹೆಗ್ಗೋಡು , ನಾಜರ‍್ಪಿಒ ಎಸ್ .ಶೃತಿ , ಮುಕುಂದ್ ಮೈಗೂರ್ ಅವಿನಾಶ್ ಶಬರೀಶ್ ,ಸಿನಿಮಾಟೊಗ್ರಫಿ ಎ,ಎಸ್ ಶೆಟ್ಟಿ., ಹಿನ್ನೆಲೆ ಸಂಗೀತಾ ಪೂರ್ಣಚಂದ್ರ ತೇಜಸ್ವಿ, ಸಂಗೀತ -ಅಪರಿಜಿತ್, ಜಾಸ್ ಜೊಸ್ಸಿ., ಸಂಕಲನ ವೆಂಕಿ ಯು,ಢಿ ವಿ, .,ವಿಕಾಶ್ ಚಂದ್ರ., ಮತ್ತು ಚಿತ್ರದ ನಿರ್ಮಾಣವನ್ನು ಪೀಪಲ್ ವರ್ಲ್ಡ್ ಫಿಲಂಸ್ ನಿರ್ಮಿಸಿದೆ .,

Share this post:

Translate »