ಒಂದು ಸಿನಿಮಾ ಗೆಲ್ಲುವುದಕ್ಕೆ ಸಂಗೀತ ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ಎಷ್ಟೋ ಸಲ ಹಾಡುಗಳಿಗಾಗಿಯೇ ಥಿಯೇಟರ್ಗೆ ಜನ ಬಂದಿರುವ ಉದಾಹರಣೆ ಇದೆ. ಸಂಗೀತ ಪ್ರಿಯರ ನಾಡಿಮಿಡಿತ ಅರಿತು ಮ್ಯೂಸಿಕ್ ನೀಡುವುದರಲ್ಲಿ ಚರಣ್ ರಾಜ್ ಎತ್ತಿದ ಕೈ. ತಮ್ಮ ಸಂಗೀತ ನಿರ್ದೇಶಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೪ ರಲ್ಲಿ ತೆರೆಕಂಡ `ಹರಿವು’ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಟಗರು, ಸಲಗ, ಭೀಮದಂತಹ ರಗಡ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಇವರದ್ದು. ಸಿನಿ ಜರ್ನಿ, ಕನ್ನಡದ ನಂಟು, ಹಾಡುಗಳ ಕಲ್ಪನೆ, ಸಂಗೀತದ ಹುಟ್ಟು ಎಲ್ಲದರ ಬಗ್ಗೆ ಚಿತ್ತಾರದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
* ಮಲಯಾಳಂನಿಂದ ಜರ್ನಿ ಶುರು ಮಾಡುವುದಕ್ಕೆ ಕಾರಣವೇನು..?
`ನಂದು ಮೂಲತಃ ಕೊಡಗು. ಹುಟ್ಟಿದ್ದು ಮಡಿಕೇರಿ.. ವ್ಯಾಸಂಗವನ್ನೆಲ್ಲಾ ಮಾಡಿದ್ದು ವಿರಾಜಪೇಟೆ. ಚಿಕ್ಕಂದಿನಿAದಲೇ ಮ್ಯೂಸಿಕ್ ಅಂದ್ರೆ ತುಂಬಾ ಇಷ್ಟ ಇತ್ತು. ಆಗಲೇ ಕಲೀತಾ ಇದ್ದೆ. ಆಗ ಶಾಸ್ತಿçÃಯ ಸಂಗೀತ ಕಲಿಯುತ್ತಿದ್ದೆ. ನಮ್ಮ ತಾಯಿ ಕೂಡ ಮ್ಯೂಸಿಕ್ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದವರೆ ಆಗಿದ್ದರು. ಭಾವಗೀತೆಗಳನ್ನಾಗಲಿ, ಜಾನಪದ ಗೀತೆಗಳನ್ನಾಗಲಿ ಸುಲಭವಾಗಿ ಕಲಿಯುವುದಕ್ಕೆ ಮನೆಯಲ್ಲಿಯೇ ವಾತಾವಾರಣ ಚೆನ್ನಾಗಿ ಇತ್ತು. ಫಾರ್ಮಾಲಿಕ್ ಆಗಿ ಕಲಿತದ್ದಕ್ಕಿಂತ ಹೆಚ್ಚಾಗಿ, ಕೇಳಿ ಕೇಳಿಯೇ ನಾನು ಸಂಗೀತದ ಒಳಹೊಕ್ಕಿದ್ದು ಜಾಸ್ತಿ. ಶಾಲಾ ಕಾರ್ಯಕ್ರಮಗಳಲೆಲ್ಲಾ ನನ್ನದೆ ಸಂಗೀತ. ಬಳಿಕ ಇಂಜಿನಿಯರಿಂಗ್ ಮುಗಿಸಿದೆ. ಆ ಸಮಯದಲ್ಲಿ ನಂಗೆ ವೆಸ್ಟರ್ನ್ ಮ್ಯೂಸಿಕ್ ಕಲಿಯುವ ಅವಕಾಶ ಸಿಕ್ತು. ಕಾಲೇಜಲ್ಲಿ ಓದುವಾಗಲೇ ಕೇರಳದ ಮ್ಯೂಸಿಷಿಯನ್ ನನ್ನ ಸೀನಿಯರ್ ಆಗಿದ್ರು. ಆಗ ಅವರೊಟ್ಟಿಗೆ ಸೇರಿಕೊಂಡು ಒಂದು ಬ್ಯಾಂಡ್ ಶುರು ಮಾಡಿದೆವು. ಸಂಗೀತವನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನ ನಾವು ಅದಾಗಲೇ ಡಿಸೈಡ್ ಮಾಡಿಕೊಂಡಿದ್ದೆವು. ಹೀಗಾಗಿ ಎಜುಕೇಷನ್ ಮುಗಿದ ತಕ್ಷಣ ಕೇರಳಕ್ಕೆ ಹೋದೆವು. ಪ್ರೋಗ್ರಾಮಿಂಗ್ ನನ್ನ ತುಂಬಾ ಎಕ್ಸೆöÊಟ್ ಮಾಡಿತ್ತು. ಹೀಗಾಗಿ ಆ ಕಡೆಗೆ ಹೋದೆ. ಮಲಯಾಳಂ ಮೂಲಕವೇ ನನ್ನ ಜರ್ನಿ ಶುರು ಮಾಡಿದ್ದು. ಅಲ್ಲಿ ಹೋಗಿ ಕೆಲಸ ಶುರು ಮಾಡಿದ್ದರ ಕಾರಣ, ಅಲ್ಲಿಯೇ ಅವಕಾಶ ಸಿಕ್ಕಿದ್ದೇ ಆಗಿತ್ತು’
* ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೂ ಮುನ್ನ ಮಾಡಿದ ಸರ್ಕಸ್..?
`ಸಿನಿಮಾ ಮ್ಯೂಸಿಕ್ಗೆ ಬರುವುದಕ್ಕೂ ಮುನ್ನ ಜಾಹೀರಾತು ಮ್ಯೂಸಿಕ್ನಲ್ಲಿ ಕೆಲಸ ಮಾಡಿದ್ದೀನಿ. ಆ ಸಮಯದಲ್ಲಿ ರಿಕ್ಕಿ ಕೇಜ್ ಅವರ ಪರಿಚಯವಾಗಿತ್ತು. ಅವರು ನನ್ನ ಮೆಂಟರ್. ನಂಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ, ಸಪೋರ್ಟ್ ಮಾಡಿದ್ದಾರೆ. ಅವರ ಮನೆಯಲ್ಲಿಯೇ ಹೆಚ್ಚು ಇರ್ತಾ ಇದ್ದೆ. ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೂ ಮುನ್ನ ಕೂಡ ಒಂದಷ್ಟು ಸರ್ಕಸ್ ಮಾಡಿದ್ದೀನಿ. ಆದರೆ ಆ ಸಮಯದಲ್ಲಿ ಅದು ಸರ್ಕಸ್ ಎನಿಸಲಿಲ್ಲ. ಯಾಕಂದ್ರೆ ಎಕ್ಸೆöÊಟ್ಮೆಂಟೇ ಜಾಸ್ತಿ ಇತ್ತು. ಮ್ಯೂಸಿಕ್ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಏನಾದರೊಂದನ್ನು ಮಾಡುತ್ತಾ ಇದ್ದೆವು. ಮನೆಯಲ್ಲೂ ಒಳ್ಳೆ ಸಪೋರ್ಟ್ ಮಾಡುತ್ತಿದ್ದರು. ನಾನು ಸಂಗೀತ ಕ್ಷೇತ್ರಕ್ಕೆ ಬಂದಿದ್ದು ಅವರಿಗೂ ಕೂಡ ತುಂಬಾ ಖುಷಿ ಇತ್ತು. ಹೀಗಾಗಿ ಇಂಜಿನಿಯರಿಂಗ್ ಮುಗಿದ ಕೂಡಲೇ ಸಂಗೀತ ಕ್ಷೇತ್ರದತ್ತ ಬಂದು ಬಿಟ್ಟೆ. ಒಂದು ಪ್ರಾಜೆಕ್ಟ್ಗೋಸ್ಕರ ಬೆಂಗಳೂರು ಬಂದೆ. ನಾನು ಇಲ್ಲಿಯವನೇ ಆಗಿದ್ದ ಕಾರಣ ಕನ್ನಡ ಸಿನಿಮಾ ಇಂಡಸ್ಟಿçಯಲ್ಲಿ ಮ್ಯೂಸಿಕ್ ಮಾಡುವ ಆಸಕ್ತಿ ಜಾಸ್ತಿ ಇತ್ತು’
* ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ಪುಷ್ಪಕ ವಿಮಾನ ಅನುಭವ..?
`ಆಕ್ಚುಲಿ ನನ್ನನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ರೈಟರ್ ಧನಂಜಯ್ ರಂಜನ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮಾಡುವಾಗ ಮ್ಯೂಸಿಕ್ ಟ್ರಿಕ್ಕಿ ಇತ್ತು. ಮ್ಯೂಸಿಕ್ ಕೇಳಿದಾಗ ಫ್ರೆಶ್ ಅಂತ ಹೇಳ್ತಾ ಇದ್ರು. ಹೇಮಂತ್ ರಾವ್ ಅವರಿಗೆ ಮ್ಯೂಸಿಕ್ ರಿಲೇಟೆಡ್ ಆಯ್ತು. ಅವರು ಅಪ್ರಿಶಿಯೇಟ್ ಕೂಡ ಮಾಡಿದ್ರು. ಆಗ ಒಂದು ಕಾನ್ಫಿಡೆನ್ಸ್ ಬಂತು. ಪುಷ್ಪಕ ವಿಮಾನ ಸಿನಿಮಾ ಮ್ಯೂಸಿಕ್ ಒಳ್ಳೆ ಯಶಸ್ಸು ತಂದು ಕೊಡ್ತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂಗೆ ಒಂದೊಳ್ಳೆ ಅವಕಾಶ ಸಿಕ್ಕಂತೆ ಆಯ್ತು. ಅದಾದ ಮೇಲೆ ನಾನು ಎಲ್ಲರನ್ನು ಭೇಟಿ ಮಾಡುತ್ತಾ ಇದ್ದೆ. ಅದೇ ರೀತಿ ವಿಖ್ಯಾತ್ ಎಂಬುವವರನ್ನು ಭೇಟಿ ಮಾಡಿದೆ. ಪುಷ್ಪಕ ವಿಮಾನ ಕೂಡ ಸಿಕ್ತು. ಪುಷ್ಪಕ ವಿಮಾನ ಸಂಗೀತ ಬಗ್ಗೆ ಆ ಸಮಯದಲ್ಲಿ ಒಂದಷ್ಟು ಚರ್ಚೆಗಳಾದ್ವು. ಆದ್ರೆ ನಂಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಬಿಕಾಸ್ ನಾನು ಆ ಮ್ಯೂಸಿಕ್ಗಾಗಿ ಕಷ್ಟಪಟ್ಟು ಮಾಡಿದ್ದೀನಿ. ಈಗಲೂ ಜಯಂತ್ ಸರ್ ಬರೆದ ಹಾಡನ್ನ ಕೇಳುವವರಿದ್ದಾರೆ. ನಂಗೂ ಕಳಿಸ್ತಾನೆ ಇರ್ತಾರೆ’
* ಸೂರಿ ಅವರ ನಿರ್ದೇಶನ ಟಗರು ಸಿನಿಮಾಗೆ ಮ್ಯೂಸಿಕ್ ಮಾಡಿದ ಅನುಭವ..?
`ಸೂರಿ ಸರ್ ನನ್ನನ್ನ ಮನೆ ಮನೆಗೂ ತಲುಪಿಸಿದರು. ನನ್ನ ಲಕ್ ನಿಜಕ್ಕೂ ಚೆನ್ನಾಗಿದೆ. ಎಲ್ಲಾ ಒಳ್ಳೆಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಅವಕಾಶಗಳು ಕೂಡ ಅದದಾಗಿಯೇ ಹೆಚ್ಚು ಬರ್ತಾ ಇತ್ತು. ರೈಟ್ ಟೈಮ್ ರೈಟ್ ಪ್ಲೇಸ್ನಲ್ಲಿ ಇರ್ತಾ ಇದ್ದೆ. ಸೂರಿ ಸರ್ ಪರಿಚಯ ಆಗಿದ್ದು ನಂಗೆ ಜಯಂತ್ ಸರ್ ಮುಖಾಂತರ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಹಾಡುಗಳನ್ನು ಕೇಳಿ ಅಂತ ಸೂರಿ ಸರ್ಗೆ ಹೇಳಿದ್ರು. ಅಯೋಮಯ ಎಂಬ ಹಾಡು ಅವರಿಗೆ ತುಂಬಾ ಇಷ್ಟ ಆಗಿತ್ತು. ಬಳಿಕ ನನ್ನನ್ನು ಭೇಟಿಗೆಂದು ಕರೆಸಿದರು. ಅವರು ಬಂದಾಗ ನಾನು ತಬ್ಬಿಬ್ಬಾಗಿದ್ದೆ. ಅಷ್ಟು ದೊಡ್ಡ ನಿರ್ದೇಶಕರ ಬಳಿ ನಾನೇಗೆ ರಿಯಾಕ್ಟ್ ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ.. ಅವರಿಗೆ ನಾನು ಮಾಡಿದ ಮ್ಯೂಸಿಕ್ ಎಲ್ಲಾ ತೋರಿಸಿದೆ. ಅವರಿಗೂ ಹಿಡಿಸಿತು ಎನಿಸಿದೆ. ಮ್ಯೂಸಿಕ್ ಇಷ್ಟವಾದ ಮೇಲೆ ಟಗರು ಸಿನಿಮಾ ಅವಕಾಶ ನೀಡಿದರು. ಅವರ ಜೊತೆಗೆ ಕೆಲಸ ಮಾಡುವುದೇ ಖುಷಿ, ಅದಕ್ಕಿಂತ ದೊಡ್ಡ ಅವಕಾಶ ಇಲ್ಲ. ಒಪ್ಪಿಕೊಂಡು ಕೆಲಸ ಶುರು ಮಾಡಿದೆ. ಅವರೇಳಿದ ಹಾಗೇ ಮ್ಯೂಸಿಕ್ ಮಾಡಿ ಕಳುಹಿಸಿದಾಗ ಏನೋ ಸ್ಪೆಷಲ್ ಇದೆ ಅಂತ ಅವರಿಗೆ ಅನ್ನಿಸಿ, ಇಷ್ಟ ಪಡುವುದಕ್ಕೆ ಶುರು ಮಾಡಿದರು. ಒಳ್ಳೆ ನಿರ್ದೇಶಕರು ನಮ್ಮಿಂದ ಕೆಲಸವನ್ನು ತೆಗೀಸ್ತಾರೆ. ಟೇಸ್ಟ್ ಇರುವುದು ಡೈರೆಕ್ಟರ್ಸ್ಗೆ. ನನ್ನಿಂದ ಸೂರಿ ಸರ್ ಕೆಲಸ ತೆಗೆಸಿದರು. ಟಗರು ಟೈಟಲ್ ಟ್ರಾö್ಯಕ್ನಲ್ಲಿ ಒಂದು ಥೀಮ್ ಬರುತ್ತೆ. ಥಥಥಥಥ.. ನಾನೊಂದು ಡೆಮೋ ಕ್ರಾö್ಯಕ್ ಮಾಡಿ ಇಟ್ಟಿದ್ದೆ. ಸರ್ಗೆ ತೋರಿಸಿದ್ದೆ ಆದರೆ ಸೈಡ್ನಲ್ಲಿ ಇಟ್ಟಿದ್ದೆವು. ಅದನ್ನ ಮುಂದುವರೆಸಿರಲಿಲ್ಲ. ಬೇರೆ ಎಲ್ಲಾ ಹಾಡುಗಳನ್ನು ಕ್ರಾö್ಯಕ್ ಮಾಡ್ತಾ ಇದ್ದೆ. ಸಿನಿಮಾದಲ್ಲಿ ಒಂದು ಸ್ಟಾçಂಗ್ ಟ್ರಾö್ಯಕ್ ಏನಾದ್ರೂ ಬೇಕು ಎಂದಾಗ ಟೀಸರ್ಗೆ ಆ ಸೌಂಡ್ ಬಳಕೆ ಮಾಡಿಕೊಂಡಿದ್ದೆವು. ಆಮೇಲೆ ಸರ್ ಹೇಳಿದ್ರು ಇದೇ ಸೌಂಡ್ ಮೇಲೆ ನಾವ್ಯಾಕೆ ಹಾಡನ್ನ ಡೆವಲಪ್ ಮಾಡಬಾರದು ಅಂತ.. ಓಕೆ ಎಂದು ಆ ಕ್ಷಣಕ್ಕೆ ಶುರು ಮಾಡಿದೆವು. ಸರ್ ಕೂಡ ಜೊತೆಗೆ ಕೂತರು. ಮೂರು ಗಂಟೆಗೆಲ್ಲಾ ಸಾಂಗ್ ಮುಗಿದು ಹೋಯ್ತು. ಇನ್ನು ಶಿವಣ್ಣ ಅದಕ್ಕೆ ಡ್ಯಾನ್ಸ್ ಮಾಡ್ತಾರೆ ಎಂದಾಗ ಆದಂತ ಖುಷಿ ಅಷ್ಟಿಷ್ಟಲ್ಲ. ಚಿಕ್ಕಂದಿನಿAದಾನೇ ಅವರನ್ನ ನೋಡಿಕೊಂಡು, ಆರಾಧಿಸಿಕೊಂಡು, ಬಂದAತವ ನಾನು. ಈಗ ನಾನು ರಚಿಸಿದ ಹಾಡಿಗೆ ಶಿವಣ್ಣ ಕುಣಿಯುತ್ತಾರೆ ಎಂದರೆ ನನಗಾದ ಸಂತಸ ಅಷ್ಟಿಷ್ಟಲ್ಲ’
* ಕವಲುದಾರಿಯಲ್ಲಿ ಮ್ಯೂಸಿಕ್ ಶುರುವಾಗಿದ್ದೇಗೆ..?
`ನಾನು ಹೇಮಂತ್ ರಾವ್ ಅವರೊಂದಿಗೆ ಭಯವಿಲ್ಲದೆ ಕೆಲಸ ಮಾಡಬಹುದು. ಅಷ್ಟು ನಂಬಿಕೆ ಅವರ ಮೇಲೆ ಇದೆ, ಮುಖ್ಯವಾಗಿ ಸ್ಪೇಸ್ ಕೊಡ್ತಾರೆ, ಈ ಸಿನಿಮಾದ ಮ್ಯೂಸಿಕ್ಗೆ ಯಾವ ಎಕ್ಸ್ಪಿರಿಮೆಂಟ್ ವರ್ಕ್ ಆಗುತ್ತೆ ಎಂದು ಹೇಳುವ ಶಕ್ತಿ ಅವರಿಗಿದೆ. ಸಂಗೀತದಲ್ಲಿ ಅಭಿರುಚಿ ಜಾಸ್ತಿ ಇದೆ. ಸಂಗೀತ ಶುರು ಮಾಡುವುದಕ್ಕೂ ಮುನ್ನವೇ ಒಂದಷ್ಟು ಸಿದ್ಧತೆ ಮಾಡಿಸಿ, ಆ ಝೋನ್ಗೆ ಹೋಗುವಂತೆ ಮಾಡ್ತಾರೆ. ಕವಲುದಾರಿ ಮಾಡುವಾಗ ದೊಡ್ಡಮಟ್ಟದಲ್ಲಿ ಸಪೋರ್ಟ್ ಸಿಕ್ಕಿದ್ದು ಪಿಆರ್ಕೆ ಪ್ರೊಡಕ್ಷನ್ನಿಂದ. ಹೊರಗಡೆಯಲ್ಲಿಯೇ ಆರ್ಕೆಸ್ಟಾç ಎಲ್ಲಾ ರೆಕಾರ್ಡ್ ಮಾಡಿಕೊಂಡೆವು. ಅಪ್ಪು ಸರ್ ಅವರಿಂದಾನೇ ಆದಂತ ಚಿತ್ರ. ನಾನು ಅಂದಿಗೆ ಲಕ್ಕಿ ಅಂತಾನೇ ಭಾವಿಸ್ತೀನಿ.
* ಜೇಮ್ಸ್ನಲ್ಲೂ ನಿಮ್ಮದೇ ಮ್ಯೂಸಿಕ್..!
`ಕವಲುದಾರಿ ಸಿನಿಮಾ ಮಾಡುವಾಗಲೇ ಪುನೀತ್ ಸರ್ ಒಟ್ಟಿಗೆ ಒಂದಷ್ಟು ಸಮಯ ಕಳೆದಿದ್ದೆ. ಮ್ಯೂಸಿಕ್ ಸಂಬಂಧ ಅವರು ಕೂಡ ಆಗಾಗ ಕರೆಸಿಕೊಳ್ಳುತ್ತಿದ್ದರು. ಪುನೀತ್ ಸರ್ ಕಡೆಯಿಂದಾನೇ ಜೇಮ್ಸ್ ಕೂಡ ಸಿಕ್ಕಿದ್ದು. ಪುನೀತ್ ಸರ್ಗೆ ಮ್ಯೂಸಿಕ್ ಅಂದ್ರೆನೆ ತುಂಬಾ ಇಷ್ಟ. ತುಂಬಾನೇ ಪ್ರೋತ್ಸಾಹ ನೀಡುತ್ತಾ ಇದ್ದರು, ಬೆಂಬಲ ಕೊಡುತ್ತಾ ಇದ್ರು. ಅದರಿಂದ ನಮಗೆ ಇನ್ನಷ್ಟು ಶಕ್ತಿ, ಸ್ಪೂರ್ತಿ ಹೆಚ್ಚಾಗುತ್ತಾ ಇತ್ತು. ಅಪ್ಪು ಸರ್ ಮಾತುಗಳಿಂದ ಇನ್ನೇನೋ ಮಾಡಬೇಕು ಎಂಬ ಹುಮ್ಮಸ್ಸು ಬರ್ತಾ ಇತ್ತು. ಆದರೆ ಅಷ್ಟು ಸಪೋರ್ಟಿವ್ ವ್ಯಕ್ತಿ ನಮ್ಮ ಜೊತೆಗೆ ಇಲ್ಲದೆ ಇರುವುದೇ ದುಃಖದ ವಿಚಾರ. ಅವರಿದ್ದಿದ್ದರೆ ಅವರ ಇನ್ನಷ್ಟು ಸಿನಿಮಾಗಳಲ್ಲಿ ನಾನು ವರ್ಕ್ ಮಾಡುವ ಅವಕಾಶ ಪಡೆದುಕೊಳ್ಳುತ್ತಿದ್ದೆ ಎನಿಸುತ್ತದೆ’
* ಸಪ್ತಸಾಗರದಾಚೆ ಹೊರಟಿದ್ದೇಗೆ..?
`ನಾನು ಇದಕ್ಕೆ ಮೊದಲಿಗೆ ಥ್ಯಾಂಕ್ಸ್ ಹೇಳಬೇಕಿರುವುದು ರಕ್ಷಿತ್ ಶೆಟ್ಟಿ ಅವರ ಪರವಃಗೆ ಅಂಡ್ ಹೇಮಂತ್ ರಾವ್ ಅವರಿಗೆ. ನಾನೀವತ್ತು ಒಂದು ಕೆರಿಯರ್ನ ಬಿಲ್ಡ್ ಮಾಡಿಕೊಂಡಿರುವುದಕ್ಕೆ ಹೇಮಂತ್ ರಾವ್ ಕೂಡ ಕಾರಣಕರ್ತರಾಗಿದ್ದಾರೆ. ಆ ಮ್ಯೂಸಿಕ್ ಒಂದು ರೀತಿ ಚಾಲೆಂಜಿಂಗ್ ಆಗಿತ್ತು. ಅಟ್ ದಿ ಸೇಮ್ ಟೈಮ್ ತುಂಬಾ ಎಂಜಾಯ್ ಮಾಡಿಕೊಂಡು ಮಾಡಿದಂತ ಸಿನಿಮಾ ಅದಾಗಿತ್ತು. ಹೇಮಂತ್ ಅವರ ಐಡಿಯಾ ಹೇಗಿತ್ತೋ ಅದೇ ರೀತಿಯಲ್ಲಿಯೇ ಕೆಲಸ ಮಾಡಿರುವುದು. ಆ ಸಿನಿಮಾ ಮುಗಿಯುವುದರೊಳಗೆ ತುಂಬಾ ಒಳ್ಳೊಳ್ಳೆ ಮೂಮೆಂಟ್ಸ್ ಕ್ರಿಯೇಟ್ ಆಗಿದೆ. ಟೈಟಲ್ ಟ್ರ್ಯಾಕ್ ತುಂಬಾ ಫೇಮಸ್ ಆಗಿದೆ. ಸಿನಿಮಾದಲ್ಲಿ ಏನು ಆರಂಭದಲ್ಲಿಯೇ ಮ್ಯೂಸಿಕ್ ನೀಡಲಾಗಿದೆ, ಆ ಟ್ರ್ಯಾಕ್ ಅನ್ನು ನಾವೂ ಕೊನೆಯಲ್ಲಿ ಮಾಡಿದ್ದು. ಆ ಟ್ರಾö್ಯಕ್ ಬಳಸಲ್ಲ ಅಂತ ಅಂದುಕೊAಡಿದ್ದೆ. ಅದು ನಂಗು ಕೂಡ ಸಪ್ರೆöÊಸ್ ಆಗಿತ್ತು. ಸಪ್ತ..ಸಾಗರ..ದಾಚೆ ಎಲ್ಲೋ..ಓಓ.. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಒಳ್ಳೆ ಪ್ರೀತಿ ಕೂಡ ಸಿಕ್ಕಿದೆ. ಸಪೋರ್ಟ್ ಸಿಕ್ಕಿದೆ’
* ಸಲಗ ಮ್ಯೂಸಿಕ್ ಆಗಿದ್ದೇಗೆ..?
`ಟಗರು ನಂತರ ವಿಜಯ್ ಸರ್ ಪರಿಚಯ ಆದ್ರೂ. ಸಲಗ ಶುರುವಾದಾಗ ಶ್ರೀಕಾಂತ್ ಸರ್ ಅಂಡ್ ವಿಜಯ್ ಸರ್ ನನ್ನ ಕರೆದು, ಈ ಅಸೈನ್ಮೆಂಟ್ ಕೊಟ್ರು. ಟಗರುನಲ್ಲಿ ಎಕ್ಸ್ಪೋಶರ್ ತುಂಬಾ ಸಿಕ್ತು. ಜೊತೆಗೆ ಟಗರು ಸಿನಿಮಾದಲ್ಲಿನ ಮ್ಯೂಸಿಕ್ ತುಂಬಾ ಹೊಸದು. ಅದನ್ನ ಅಂಡರ್ಸ್ಟಾAಡ್ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಿತು. ಆದರೆ ಅದನ್ನ ತುಂಬಾ ಎಂಜಾಯ್ ಮಾಡಿದೆ. ತುಂಬಾ ಪ್ಯಾಷನೇಟ್ ಆಯ್ತು. ವಿಜಯ್ ಸರ್ ತುಂಬಾನೇ ಟ್ರಸ್ಟ್ ಮಾಡ್ತಾರೆ. ಒಬ್ಬ ಟೆಕ್ನಿಷಿಯನ್ಗೆ ನಂಬಿಕೆ ಇಡುವಂತಹದ್ದು ಬಹಳ ಮುಖ್ಯ. ಆಗ ಭಯವಿಲ್ಲದೆ ಕೆಲಸ ಮಾಡಬಹುದು. ವಿಜಯ್ ಸರ್ ತುಂಬಾ ಟ್ರಾವೆಲ್ ಮಾಡ್ತಾರೆ. ಅಲ್ಲಿ ಏನೇ ಹೊಸ ವಾಯ್ಸ್ ಸಿಕ್ಕರು ಅದನ್ನ ಕಳುಹಿಸುತ್ತಿದ್ದರು. ಸಿದ್ದಿ ಜನಾಂಗದವರ ಮನೆಗೆ ಹೋದಾಗಲೂ ಅವರ ವಾಯ್ಸ್ ಕ್ಯಾಚ್ ಮಾಡಿ ನನಗೆ ಕಳುಹಿಸಿದ್ದರು. ಇದರಿಂದ ಏನಾದರೂ ಮಾಡಬಹುದಾ ನೋಡಿ ಎಂದಿದ್ದರು’
* ರಾಯಲ್ನಲ್ಲೂ ನಿಮ್ಮದೇ ಕೈಚಳಕ..?
`ನಾನು ತುಂಬಾ ಇಷ್ಪಡುವಂತ ತಂಡ ರಾಯಲ್. ದಿನಕರ್ ಸರ್, ಜಯಣ್ಣ ಸರ್ ಪ್ರೊಡಕ್ಷನ್. ಅದರಲ್ಲಿ ಐದು ಹಾಡುಗಳಿವೆ. ಟಂಗ್ ಟಂಗ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ತಾಯಿ ಮೇಲೊಂದು ಹಾಡಿದೆ. ಲೋಕಲ್ ಡ್ಯಾನ್ಸ್ ಫ್ಲೇವರ್ ಇರುವಂತ ಹಾಡೊಂದು ಇದೆ. ಯುವ ರಾಜ್ಕುಮಾರ್ ಅವರ ಯಕ್ಕಾ, ಫೈರ್ ಫ್ಲೈ ಗೂ ನಾನು ಮ್ಯೂಸಿಕ್ ನೀಡಿದ್ದೀನಿ’
* ಒಂದು ಹಾಡು ರೆಡಿಯಾಗಬೇಕಾದ್ರೆ ಏನೆಲ್ಲಾ ಮಾಡ್ತೀರಾ..?
`ಒಂದು ಹಾಡು ರೆಡಿಯಾಗಬೇಕಾದರೆ ಕೆಲವೊಮ್ಮೆ ಟ್ಯೂನ್ ಬರುತ್ತೆ, ಕೆಲವೊಮ್ಮೆ ಲಿರಿಕ್ಸ್ ಕೂಡ ಬರುತ್ತದೆ, ಇನ್ನು ಕೆಲವೊಮ್ಮೆ ಬರೀ ಇನ್ಸ್ಟೂçಮೆಂಟ್ ಮಾತ್ರ ಬರುತ್ತೆ. ಆಮೇಲೆ ನಾವೊಂದು ರಿದಮ್ ಸೆಟ್ ಮಾಡ್ತೀವಿ. ಹಾಡುಗಳನ್ನು ಯಾರು ಬರೀತಾರೆ ಅವರನ್ನ ಕರೆಸುತ್ತೀವಿ. ಆ ರಿದಮ್ಗೆ ಬರೆಸುವುದಕ್ಕೆ ಟ್ರ್ಯಾಕ್ಮಾಡ್ತೀವಿ ಅಥವಾ ಬರೆದಿದ್ದ ಲಿರಿಕ್ಗೆ ಟ್ಯೂನ್ ಮಾಡ್ತೀವಿ. ಯಾವುದೇ ಬಂದರು ಅದಕ್ಕೆ ಉಳಿದದ್ದು ಮಾಡಲೇಬೇಕು. ಇದರಲ್ಲಿ ಯಾವುದು ಬೆಟರ್ ಅಂತ ಹೇಳುವುದಕ್ಕೆ ಆಗುವುದಿಲ್ಲ’
* ನೀವೂ ದೊಡ್ಡವರ ಸಿನಿಮಾಗಳಿಗೆ ಮಾತ್ರ ಮ್ಯೂಸಿಕ್ ಮಾಡುವುದಾ..?
`ಹಾಗೇನು ಇಲ್ಲ. ನಾನು ನೋಡುವುದು ಕಥೆಯನ್ನ. ಕಥೆ ಚೆನ್ನಾಗಿದ್ದರೆ, ನಿರ್ದೇಶಕರೊಟ್ಟಿಗೆ ನನ್ನ ವೈಬ್ ಹೇಗಿರುತ್ತೆ ಎಂಬುದರ ಮೇಲೆ ನಾನು ಪ್ರಾಜೆಕ್ಟ್ಗಳನ್ನ ಒಪ್ಪಿಕೊಳ್ಳುತ್ತೇನೆ. ಹಾಗ್ ನೋಡಿದ್ರೆ ನಾನು ತುಂಬಾ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಅದು ನಂಗೆ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ನನಗೂ ತುಂಬಾ ವರ್ಕ್ ಮಾಡುವಂತ ಅವಕಾಶ ಸಿಕ್ಕಂತೆ ಆಗುತ್ತೆ. ಒಳ್ಳೆ ತಂಡಗಳಿಗೆ ಖಂಡಿತ ನಾನು ಅವೈಲಬಲ್ ಇದ್ದೀನಿ’
ಇದು ಚರಣ್ ರಾಜ್ ಅವರ ಸಂಗೀತ ಜನಿ. ಕೈಯಲ್ಲೂ ಈಗಲೂ ಸಾಕಷ್ಟು ಪ್ರಾಜೆಕ್ಟ್ಗಳಿದ್ದು, ಹೀಗೆ ಮರೆಯಲಾಗದ ಹಾಡುಗಳು ಇವರಿಂದ ಬರ್ತಾ ಇರಲಿ ಎಂದು ಚಿತ್ತಾರವೂ ಹಾರೈಸುತ್ತದೆ.