ನಟ ಅರ್ಜುನ್ ರಮೇಶ್ ಹುಟ್ಟು ಹಬ್ಬದ ಪ್ರಯುಕ್ತ ಕುರುಡು ಕಾಂಚಾಣ ಹಾಡು ರಿಲೀಸ್ ಮಾಡಿದ ಚಿತ್ರತಂಡ.
ಈಗಾಗಲೇ ಭರ್ಜರಿ ಪ್ರೊಮೋಷನ್ ನಲ್ಲಿ ಚಿತ್ರ ತಂಡ ತೊಡಗಿಕೊಂಡಿದ್ದು ಜುಲೈ 1ರಿಂದ “ಕೌಟಿಲ್ಯ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
ಈಗಾಗಲೇ ಹಾಡುಗಳಿಂದ ಸದ್ದು ಮಾಡಿರುವ ಕೌಟಿಲ್ಯ ಚಿತ್ರವು ಜುಲೈ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಜೇಂದ್ರ ರವರ ನಿರ್ಮಾಣದಲ್ಲಿ ಪ್ರಬಾಕರ್ ಶೇರ್ ಖಾನೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಂತೆಯೇ ಮನಸಾರೆ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಇಬ್ಬರೂ ನಟರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕೌಟಿಲ್ಯ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದು, ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ.