ಕಾರ್ತಿಕ್ ಮಹೇಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವು ಸೀರಿಯಲ್ಗಳಲ್ಲಿ ಗಮನ ಸೆಳೆದು, ಸಿನಿಮಾದಲ್ಲಿ ಜಯಿಸಿ, ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕೂಡ. ಆದರೆ ನಟನಾಗಬೇಕು ಅಂತ ಯಾವತ್ತಿಗೂ ಅಂದುಕೊಂಡಿರಲಿಲ್ಲ. ಹಾಗಾದ್ರೆ ನಟನಾಗಿದ್ದು ಹೇಗೆ..? ಬಾಲ್ಯದ ನೆನೆಪುಗಳು, ಟರ್ನಿಂಗ್ ಪಾಯಿಂಟ್ ಈ ಎಲ್ಲಾ ವಿಚಾರಗಳನ್ನು ʻಚಿತ್ತಾರʼದೊಂದಿಗೆ ಹಂಚಿಕೊಂಡಿದ್ದಾರೆ.
* ಚಾಮರಾಜನಗರ ಎಂದರೆ ಏನು ನೆನಪಾಗುತ್ತೆ..?
`ನಾನು ಚಾಮರಾಜನಗರದಲ್ಲಿ ಹುಟ್ಟಿದ್ದು. ಅಲ್ಲೊಂದು ೯ ತಿಂಗಳುಗಳ ಕಾಲ ಇದ್ದೆ. ಬೆಳೆದಿದ್ದೆಲ್ಲಾ ಮೈಸೂರು. ಚಾಮರಾಜನಗರಕ್ಕೆ ಹೋಗುವುದಕ್ಕೆ ತುಂಬಾ ಖುಷಿಯಾಗುತ್ತೆ. ಬೇಸಿಗೆ ಕಾಲ ಬಂತು ಎಂದರೆ, ನಾನು ಅಲ್ಲಿಯೇ ಇರುತ್ತಿದ್ದೆ. ಅದು ಅಮ್ಮನ ಊರು. ರಜೆ ಬಂದಾಗ ಅಲ್ಲಿಗೆ ಕರೆದುಕೊಂಡು ಹೋಗುತ್ತಾ ಇದ್ದರು. ಚಿಕ್ಕಪ್ಪ-ಚಿಕ್ಕಮ್ಮನ ಮಕ್ಕಳು ನಾವೆಲ್ಲಾ ಸೇರಿಕೊಂಡು ತೋಟಕ್ಕೆ ಹೋಗುತ್ತಾ ಇದ್ದೆವು. ಬಾಲ್ಯದ ಜೀವನ ತುಂಬಾ ಚೆನ್ನಾಗಿತ್ತು. ಮೈಸೂರಲ್ಲಿಯೇ ಶಿಕ್ಷಣ ಪಡೆದಿದ್ದು. ಓದುವುದರಲ್ಲಿ ನಾನು ಆವರೇಜ್ ಸ್ಟುಡೆಂಟ್. ಆದರೆ ಸ್ಪೋರ್ಟ್ಸ್ನಲ್ಲಿದ್ದೆ, ಕಲ್ಚರಲ್ ಆಕ್ಟಿವಿಟೀಸ್ನಲ್ಲಿದ್ದೆ. ಈಗಲೂ ಚಾಮರಾಜನಗರ ಎಂದರೆ ಬಲು ಪ್ರೀತಿ. ಅಲ್ಲಿನ ಜನ ನನಗೆ ತೋರಿದ ಪ್ರೀತಿಗೆ ಋಣಿ’
* ಸಾಫ್ಟ್ವೇರ್ಗೆ ಹೋದವರು ನಟನೆಗೆ ಬಂದಿದ್ದೇಗೆ..?
`ಕಲ್ಚರಲ್ ಆಕ್ಟಿವಿಟಿನಲ್ಲಿ ನಾನು ಹೆಚ್ಚಾಗಿ ಭಾಗಿಯಾಗುತ್ತಾ ಇದ್ದೆ. ನಮ್ಮ ಮಾವ ನೀನಾಸಂನಿಂದ ಕಲಿತು ಬಂದವರು. ಮ್ಯೂಸಿಕ್ ಟೀಚರ್ ಆಗಿ ಕೆಲಸ ಮಾಡಿದ್ದಾರೆ. ಅವರು ವರ್ಷಕ್ಕೊಮ್ಮೆ ಒಂದು ಕಾರ್ಯಕ್ರಮ ಮಾಡ್ತಾ ಇದ್ದರು. ಆಗ ನಾನು ಕೂಡ ಅವರ ಜೊತೆಗೆ ಒಂದು ನಾಟಕ ಮಾಡಿದ್ದೆ. ಕಂಸಾಳೆ ಡ್ಯಾನ್ಸ್ ಕೂಡ ಮಾಡಿಸಿದ್ದರು. ಬಹುಶಃ ಅದು ನಂಗೆ ಸ್ಪೂರ್ತಿಯಾಗಿರಬಹುದು. ಆ ನಾಟಕದಲ್ಲಿ ಹುಡುಗಿಯನ್ನು ಚೇಡಿಸುವ ಪಾತ್ರವದು. ಆರಂಭ ಆಗುವುದು ನನ್ನಿಂದಾನೇ ಎಂಡ್ ಆಗುವುದು ನನ್ನಿಂದಾನೇ. ಆ ನಾಟಕದಲ್ಲಿ ನಾನು ಹೇಳಿದ ಡೈಲಾಗ್ ಕೇಳಿ ಜನ ಖುಷಿ ಪಟ್ಟಿದ್ದರು. ಚಪ್ಪಾಳೆ ಹೊಡೆದಿದ್ದರು. ಅದು ನನಗೆ ಖುಷಿ ಕೊಟ್ಟಿತ್ತು. ನಾನು ನಟನಾಗಬೇಕೆಂಬ ಕನಸ್ಸನ್ನು ಕಟ್ಟಿಕೊಟ್ಟಿತ್ತು. ನಾಟಕಗಳನ್ನು ಮಾಡುವಾಗಲೂ ತುಂಬಾ ಎಂಜಾಯ್ ಮಾಡಿಕೊಂಡೆ ಮಾಡುತ್ತಾ ಇದ್ದೆ. ಒಂದು ಸಾಫ್ಟ್ವೇರ್ ಜಾಬ್ ಸಿಕ್ಕಿತ್ತು. ಮೊದಲ ದಿನ ಹೋಗಲೇ ಇಲ್ಲ. ಇದು ನನ್ನ ಆಸಕ್ತಿದಾಯಕ ಕ್ಷೇತ್ರವಲ್ಲ ಅಂತ ಗೊತ್ತಾಗಿತ್ತು. ಆಮೇಲೆ ಆಡಿಷನ್ ಅಟೆಂಡ್ ಮಾಡುವುದಕ್ಕೆ ಆರಂಭಿಸಿದೆ. ಕಾಲೇಜಲ್ಲೂ ಕೂಡ ನಾನು ಹೀರೋ ಫೀಲ್ನಲ್ಲಿಯೇ ಓಡಾಡುತ್ತಿದ್ದೆ. ಯಾವುದಕ್ಕೂ ತರಬೇತಿ ಅಂತ ತೆಗೆದುಕೊಳ್ಳಲಿಲ್ಲ. ನಟನೆ ಅನ್ನೋದು ತಾನಾಗೇ ಒಲಿದು ಬಂದಿರುವುದು ನನಗೆ ಖುಷಿ ಇದೆ. ಮೊದಲ ಸೀರಿಯಲ್ `ಖುಷಿ’ ಮಾಡಿದಾಗಲೇ ನಟನೆ ಎಂದರೆ ಏನು ಎಂಬುದನ್ನು ಕಲಿತೆ. ನಾಟಕಗಳನ್ನು ಕೂಡ ತುಂಬಾ ಏನು ಮಾಡಿರಲಿಲ್ಲ. ಕಲಿಯುವುದರ ಬಗ್ಗೆ ಹೆಚ್ಚು ಗಮನ ಕೊಡುತ್ತೀನಿ. ನಮ್ಮ ಸೀನಿಯರ್ಗಳು ಮಾಡುವುದನ್ನು ನಾನು ನೋಡುತ್ತಾ ಇರ್ತಿನಿ’
* ಅಪ್ಪ ಈಗ ಇದ್ದಿದ್ದರೆ..?
`ನಮ್ಮ ಅಪ್ಪ ತುಂಬಾ ಫ್ರೆಂಡ್ಲಿ. ಒಂದು ಹಂತದವರೆಗೂ ಬೆಲ್ಟ್ನಲ್ಲಿಯೇ ಹೊಡೀತಾ ಇದ್ದರು. ಸಣ್ಣ ತಪ್ಪು ಮಾಡುವುದಕ್ಕೂ ತುಂಬಾ ಭಯ ಪಡುತ್ತಾ ಇದ್ದೆ. ಆದರೆ ಮನೆಯಲ್ಲಿ ತುಂಬಾ ಫ್ರೆಂಡ್ಲಿಯಾಗಿದ್ದರು. ಭಯ ಎಷ್ಟಿತ್ತೋ ಅಷ್ಟೇ ಪ್ರೀತಿ, ಕಾಳಜಿ ಅಪ್ಪನಿಗೆ ನಮ್ಮ ಮೇಲೆ. ನಮ್ಮ ತಂದೆಯೇ ನಮಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಈಗಲೂ ನಂಬಿಕೆ ಇದೆ, ಮೇಲಿಂದ ಸಪೋರ್ಟ್ ಮಾಡ್ತಾ ಇದ್ದಾರೆ. ಅಂದು ಅವರಿಗೊಂದು ಆಸೆ ಇತ್ತು. ಮಗನ ಸಕ್ಸಸ್ ನೋಡುವಾಸೆ. ಚಿಂತೆಯೂ ಇತ್ತು, ನನ್ನ ಮಗ ಯಾಕೆ ಇನ್ನು ಏನು ಸಕ್ಸಸ್ ಕಾಣಿಸುತ್ತಿಲ್ಲವಲ್ಲ ಎಂಬುದು. ಡೊಳ್ಳು ಸಿನಿಮಾ ಆರಂಭವಾದಾಗ ಅವರಿದ್ದರು. ಆದರೆ ರಿಲೀಸ್ ಸಮಯದಲ್ಲಿ ಅವರು ಇರಲಿಲ್ಲ. ಬಿಗ್ ಬಾಸ್ ಜರ್ನಿಯನ್ನು ಅವರು ನೋಡಿದ್ದರೆ ತುಂಬಾ ಖುಷಿ ಪಡ್ತಾ ಇದ್ರು. ಮನೆಯಲ್ಲಿ ಒಟ್ಟಿಗೆ ಕೂತು ಟಿವಿ ನೋಡುವಾಗ, ಬಿಗ್ ಬಾಸ್ ಶೋ ನೋಡಿದಾಗಲೂ ಕೇಳ್ತಾ ಇದ್ರು, ನೀನ್ಯಾಕೆ ಹೋಗುವುದಕ್ಕೆ ಆಗಲಿಲ್ಲ ಅಂತ. ನಿನ್ನ ಜೊತೆ ನಟನೆ ಮಾಡಿದವರೆಲ್ಲಾ ಹೋಗುತ್ತಾ ಇದ್ದಾರಲ್ಲ ಅಂತ ಕೇಳಿದ್ದರು. ನಾನು ಕೂಡ ಹೇಳಿದ್ದೆ ಟೈಮ್ ಬರುತ್ತೆ ಅಪ್ಪ ಅಂತ. ಈಗ ಟೈಮ್ ಬಂದಿದೆ ಆದರೆ ಅವರೇ ಇಲ್ಲ. ಯಾವಾಗಲೂ ಸಾಧ್ಯವಾದರೆ ಒಳ್ಳೆ ಕೆಲಸವನ್ನೇ ಮಾಡು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತ ಕೆಲಸ ಮಾಡಬಾರದು ಎಂದು ಹೇಳುತ್ತಿದ್ದರು’
* ಜವಬ್ದಾರಿಗಳು ಹೆಗಲಿಗೇರಿದಾಗ..?
`ಅಪ್ಪ ಇದ್ದಾಗ ಲೈಫ್ ತುಂಬಾ ಚೆನ್ನಾಗಿಯೇ ಇತ್ತು. ಮಿಡಲ್ ಕ್ಲಾಸ್ ಲೈಫ್ ಹೇಗಿರಬೇಕು ಅದೇ ಥರ ಇತ್ತು. ಅವರಿದ್ದಾಗ ಯಾವುದೇ ರೀತಿಯ ಭಯ ಇರಲಿಲ್ಲ. ಅವರು ಹೋದ ಮೇಲೆ ಜವಬ್ದಾರಿ ಜಾಸ್ತಿ ಆಯ್ತು. ತಂಗಿ ಮದುವೆ ಬಂತು, ಮನೆಯ ಜವಬ್ದಾರಿ ಕಂಪ್ಲೀಟ್ ನನ್ನ ಮೇಲೆ ಬಂತು. ಬಿಗ್ ಬಾಸ್ಗೂ ಮುನ್ನ ಒಂದು ವರ್ಷ ಲೈಫ್ ತುಂಬಾ ಸ್ಟçಗಲ್ ಇತ್ತು. ಸೀರಿಯಲ್ ಸಾಕಿನ್ನು ಸಿನಿಮಾಗಳ ಕಡೆಗೆ ಹೆಚ್ಚು ಗಮನ ಕೊಡೋಣಾ ಅಂತ ಹುಡುಕಾಟ ಆರಂಭಿಸಿದೆ. ಹೆಲ್ತ್ ಬಗ್ಗೆ, ಬಾಡಿ ಬಗ್ಗೆ ಗಮನಹರಿಸಿದೆ. ಆ ಸಮಯದಲ್ಲಿ ಸಿಕ್ಕಿದ್ದೆ ಬಿಗ್ ಬಾಸ್. ಇಷ್ಟು ಜನರ ಪ್ರೀತಿ ಕೊಟ್ಟಿದೆ, ಒಂದು ಸಕ್ಸಸ್ ಕೊಟ್ಟಿದೆ. ಥ್ಯಾಂಕ್ಯೂ ಸೋ ಮಚ್’.
* ಬೆಂಗಳೂರು ಆರಂಭದ ಜೀವನ ಹೇಗಿತ್ತು..?
`ಬೆಂಗಳೂರಿಗೆ ಆರಂಭದಲ್ಲಿ ಬಂದಾಗ ಹಣ ಜಾಸ್ತಿ ಇರ್ತಾ ಇರಲಿಲ್ಲ. ಬಸ್ಸಿನಲ್ಲೇ ಓಡಾಡ್ತಾ ಇದ್ದೆ. ಅತ್ತೆ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಹಣ ಹೆಚ್ಚು ಖರ್ಚು ಮಾಡುವುದಕ್ಕೆ ಸಾಧ್ಯವಾಗದೆ, ನಾಟಕಗಳನ್ನು ಸಂಪೂರ್ಣ ಮಾಡದೆ ವಾಪಸ್ ಮೈಸೂರಿಗೆ ಹೋಗಿ ಬಿಟ್ಟೆ. ಆಮೇಲೆ ಸೀರಿಯಲ್ಗಳ ಕಡೆಗೆ ಆಡಿಷನ್ ಕೊಡುವುದಕ್ಕೆ ಶುರು ಮಾಡಿದೆ. ನನ್ನ ಫಸ್ಟ್ ಡೈರೆಕ್ಟರ್ ಪ್ರೀತಂ ಶೆಟ್ಟಿ ಅಂತ. ಈಗಲೂ ಇಬ್ಬರು ಒಳ್ಳೆ ಬಾಂಡಿಂಗ್ನಲ್ಲಿದ್ದೀವಿ. ಖುಷಿ ಧಾರಾವಾಹಿಗೆ ಆಡಿಷನ್ ಕೊಟ್ಟು ಹೋಗಿದ್ದೆ. ಆಮೇಲೆ ಕಾಲ್ ಮಾಡಿ ನೀವೂ ಸೆಲೆಕ್ಟ್ ಆಗಿದ್ದೀರಾ ಬನ್ನಿ ಅಂತ ಚಾನೆಲ್ನವರು ಕರೆದಿದ್ದರು. ನಾನು ಅಷ್ಟೇ `ಖುಷಿ’ಯಲ್ಲಿ ಸಾಲಾ-ಸೋಲ ಮಾಡಿ ೨೦ ಸಾವಿರದಷ್ಟು ಬಟ್ಟೆಗಳನ್ನು ಶಾಪಿಂಗ್ ಮಾಡಿ ಬಂದಿದ್ದೆ. ಬೆಂಗಳೂರಿಗೆ ಬಂದಾಗ ನೋಡಿದ್ರೆ ಇನ್ನು ಸೆಲೆಕ್ಟ್ ಆಗಿಲ್ಲ ಅಂದ್ರು. ನಂಗೆ ಭಯನೇ ಆಗಿ ಹೋಯ್ತು. ಯಾಕಂದ್ರೆ ಸಾಲ ಮಾಡಿ, ಎಲ್ಲಾ ಕಾಸ್ಟೂö್ಯಮ್ ತಂದಿದ್ದೆ. ಆಮೇಲೆ ಚಾನೆಲ್ನವರಿಗೆ ಇವರೇ ಬೇಕು ಅಂತ ಹೇಳಿ ಸೆಲೆಕ್ಟ್ ಮಾಡಿದ್ದು ಪ್ರೀತಂ ಶೆಟ್ಟಿ ಸರ್.. ಥ್ಯಾಂಕ್ಯೂ ಸೋ ಮಚ್ ಸರ್. ತೀರಾ ಕಡಿಮೆ ಇದ್ದರು, ಬೇಸರ ಮಾಡಿಕೊಂಡು ಬದುಕಿಲ್ಲ. ಅಷ್ಟರಲ್ಲೂ ಹೀಗೆ ಬದುಕಿದ್ವಿ, ಈಗ ದೇವರು ಕೊಡುತ್ತಿದ್ದಾನೆ, ಇದೇ ಥರ ಬದುಕ್ತೀವಿ’.
* ಕಿಚ್ಚ ಸುದೀಪ್ ಅವರು ನಿಮಗೆ ಯಾವ ರೀತಿ ಸ್ಪೂರ್ತಿ..?
`ಕಿಚ್ಚ ಸರ್ ಈಸ್ ಎ ಗ್ರೇಟ್ ಪರ್ಸನಾಲಿಟಿ. ಒಬ್ಬರು ಸೂಪರ್ ಸ್ಟಾರ್ ಆಗಿದ್ದುಕೊಂಡು, ನಂಗೆ ನನ್ನ ಕಂಟೆಸ್ಟೆಂಟ್ ಅಂತ ಪ್ರೀತಿಯಿಂದ ಹೇಳುತ್ತಾರೆ. ಅವರು ಒಂದು ಕಿವಿ ಮಾತು ಹೇಳ್ತಾರೆ ಒಬ್ಬರ ವ್ಯಕ್ತಿತ್ವಕ್ಕೆ ತುಂಬಾ ಪ್ರಯೋಜನ ಆಗುತ್ತೆ. ಎಷ್ಟೋ ಸಲ ನಾವೂ ಅಳಿ ತಪ್ಪುತ್ತಾ ಇರುತ್ತೀವಿ. ಆಗ ಬಹಳ ಸೂಕ್ಷ್ಮವಾಗಿ ಕಿವಿ ಮಾತು ಹೇಳುತ್ತಾರೆ. ಸರಿಯಾದ ದಾರಿಯಲ್ಲಿ ಹೋಗುವಾಗ ಅಪ್ರಿಶಿಯೇಷನ್ ಮಾಡುತ್ತಾರೆ. ಮನೆಯ ಒಳಗೆ ಹಾಗೂ ಹೊರಗೆ ಅವರ ಮಾತು ಯಾವಾಗಲೂ ಸ್ಪೂರ್ತಿ ನೀಡುತ್ತದೆ. ಅವರ ಸಿನಿಮಾಗಳನ್ನು ನೋಡಿಕೊಂಡೇ ನಾವೂ ಬೆಳೆದಿರುವುದು. ಅವರ ಸಿನಿಮಾದಿಂದಾನೂ ಸಾಕಷ್ಟು ಕಲಿತಿದ್ದೀನಿ. ಅವರನ್ನು ಕಂಡರೆ ಭಯ ಅಂದುಕೊಳ್ಳುತ್ತಿದ್ದೆ. ಅವರನ್ನು ನೋಡ್ತೀನೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ಅವರನ್ನು ಹಗ್ ಮಾಡಿಕೊಳ್ಳುವಷ್ಟು ಹತ್ತಿರವಾದೆ. ನನ್ನದು ಅದೃಷ್ಟ ಅಂತಾನೆ ಹೇಳಬಹುದು’
* ಕಾರ್ತಿಕ್ ತುಂಬಾ ಇಷ್ಟಪಡುವ ಪಾತ್ರ ಎಂಥದ್ದು..?
`ಇಂಥದ್ದೇ ಜಾನರ್ ಅಂತ ಏನಿಲ್ಲ. ನನ್ನನ್ನು ಪ್ರೀತಿಸುವಂತ ಅಭಿಮಾನಿಗಳು ಇಷ್ಟಪಡುವಂತ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೀನಿ. ನನಗೆ ಪರ್ಸನಲಿ, ಒಬ್ಬ ಹೀರೋ ಯಾವೆಲ್ಲಾ ಪಾತ್ರಗಳನ್ನು ಮಾಡಬಹುದೋ ಆ ಎಲ್ಲಾ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ. ಡೊಳ್ಳು ಸಿನಿಮಾ ನನ್ನ ಕೆರಿಯರ್ನ ಫಸ್ಟ್ ಸಿನಿಮಾ. ಆ ಸಿನಿಮಾಗೆ ರಾಷ್ಟç ಪ್ರಶಸ್ತಿ ಬಂದಿದ್ದು, ತುಂಬಾ ಖುಷಿ ಆಯ್ತು. ಸಾಗರ್ ಪುರಾಣಿಕ್ ಅವರು ನನ್ನ ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಾಗುತ್ತೆ. ಆದರೆ ಆ ಸಿನಿಮಾ ಆದ ಮೇಲೆ ಗ್ರೇಟ್ ಆಫರ್ಗಳೇನು ಬಂದಿಲ್ಲ. ಅವಕಾಶಗಳು ಇಲ್ಲದೆ ಇದ್ದಾಗ ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಈಗ ಅವಕಾಶಗಳು ಬರ್ತಾ ಇದೆ. ಆದರೆ ಅದರಲ್ಲಿ ಸರಿಯಾದ ಆಯ್ಕೆ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ನನಗೂ ಅವಮಾನ ಆಗಿದೆ. ಒಂದು ಸಲ ಪ್ರೂವ್ ಮಾಡಿಕೊಳ್ಳುವ ತನಕ. ಆಮೇಲೆ ಆ ರೀತಿಯ ಅವಮಾನಗಳು ಆಗಲ್ಲ’
`ಡೊಳ್ಳು’ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಬಿಗ್ ಬಾಸ್ಗೆ ಹೋಗಿ ತಮ್ಮ ಗುಣವನ್ನು ಮೆರೆದಿದ್ದಾರೆ. ಕಾರ್ತಿಕ್ ಮಹೇಶ್ ಈಗ ಕನ್ನಡಿಗರ ಕಣ್ಮಣಿಯಾಗಿದ್ದಾರೆ. ಕಾರ್ತಿಕ್ ಮಹೇಶ್ ಎಂದರೆ ಈ ಕ್ರೇಜ್, ಈ ಜೋಶ್ ಸದಾ ಹೀಗೆ ಉಳಿಯುವಂತೆ ಆಗಲಿ, ಪ್ರತಿಭೆಗೆ ತಕ್ಕಂತೆ ಸಾಕಷ್ಟು ಅವಕಾಶಗಳು ಕಾರ್ತಿಕ್ ಅವರ ಪಾಲಾಗಲಿ ಎಂದು ಹಾರೈಸೋಣಾ.. ಆಲ್ ದಿ ಬೆಸ್ಟ್ ಕಾರ್ತಿಕ್ ಮಹೇಶ್..