Sandalwood Leading OnlineMedia

ಬಾಹುಬಲಿ ಡೈರೆಕ್ಟರ್ ಮೂವಿಯಲ್ಲಿ ಲಾಜಿಕ್ ಇಲ್ಲ ಎಂದ ಕರಣ್ ಜೋಹರ್!

ಕರಣ್ ಜೋಹರ್ ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಇದರಲ್ಲಿ ಎರಡು ಮಾತಿಲ್ಲ. ಸ್ಟಾರ್ ಸೆಲೆಬ್ರಿಟಿ ಹೌದು, ದೊಡ್ಡ ನಿರ್ಮಾಪಕರೂ ಹೌದು. ಭಾರತೀಯ ಚಿತ್ರರಂಗದ ಪ್ರಮುಖ ಶಕ್ತಿ ಎಂದೇ ಉತ್ತರದ ಜನ ಅವರನ್ನು ಭಾರೀ ಗೌರವಿಸುತ್ತಾರೆ. ಅವರ ಬಾಲಿವುಡ್​ನ ಬಿಗ್ ಬಜೆಟ್ ಮೂವಿಗಳನ್ನು ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ. ತಮ್ಮ ರೊಮ್ಯಾಂಟಿಕ್ ಕಾಮೆಡಿ ಸಿನಿಮಾಗಳು ಮತ್ತು ಫ್ಯಾಮಿಲಿ ಡ್ರಾಮಾ ಮೂವಿಗಳಿಗೆ ಹೆಸರುವಾಸಿಯಾದ ಅವರು ಇತ್ತೀಚೆಗೆ ಕೊಟ್ಟ ಹೇಳಿಕೆ ವೈರಲ್ ಆಗಿದೆ.

 

ಸಿನಿಮಾ ನಿರ್ದೇಶಕರು ತಮ್ಮ ಕಥೆಗಳು, ಪಾತ್ರಗಳು ಮತ್ತು ಅವರು ರಚಿಸುವ ಪ್ರಪಂಚದ ಬಗ್ಗೆ ಅಚಲವಾದ ನಂಬಿಕೆ ಹೊಂದಿದ್ದರೆ ಸಿನೆಮಾ ಲಾಜಿಕ್ ಅನ್ನು ಮೀರಬಹುದು ಎಂದು ಇತ್ತೀಚೆಗೆ ಹೇಳಿದ್ದಾರೆ. ತಮ್ಮ ಅಂಶವನ್ನು ವಿವರಿಸಲು ಅವರು ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ, ಸಂದೀಪ್ ರೆಡ್ಡಿ ವಂಗಾ ಮತ್ತು ಅನಿಲ್ ಶರ್ಮಾ ಅವರ ಸಿನಿಮಾಗಳನ್ನು ಉದಾಹರಣೆಯಾಗಿ ತೆಗೆದುಕೊಂಡರು. ಆದರೆ ಒಳ್ಳೆಯ ವಿಚಾರ ಹೇಳುತ್ತಾ ಉದಾಹರಣೆ ಕೊಡುವ ಭರದಲ್ಲಿ ಕರಣ್ ಜೋಹರ್ ರಾಜಮೌಳಿ ಮೂವಿಯಲ್ಲಿ ಲಾಜಿಕ್ ಇಲ್ಲ ಎಂದಿದ್ದು ಸೌತ್ ಪ್ರೇಕ್ಷಕರ ಸಿಟ್ಟಿಗೆ ಕಾರಣವಾಯ್ತು.

 

ರಾಜಮೌಳಿಯನ್ನು ಉದಾಹರಣೆಯಾಗಿ ಬಳಸಿಕೊಂಡು ಕರಣ್ ಜೋಹರ್ ಅವರು ಬಾಹುಬಲಿ ನಿರ್ದೇಶಕರ ಸಿನಿಮಾಗಳುಲ್ಲಿ ಯಾವಾಗಲೂ ಲಾಜಿಕ್ ಇರದಿದ್ದರೂ, ನಿರ್ದೇಶಕರು ತಮ್ಮ ಕಥೆ ಹೇಳುವಿಕೆಯಲ್ಲಿ ಹೊಂದಿರುವ ಸಂಪೂರ್ಣ ವಿಶ್ವಾಸವು ಪ್ರೇಕ್ಷಕರನ್ನು ಸ್ಕ್ರೀನ್ ಮುಂದೆ ಕುತೂಹಲದಿಂದ ಕೂರುವಂತೆ ಮಾಡುತ್ತದೆ ಎಂದು ವಿವರಿಸಿದರು.

Share this post:

Translate »