ನಟಿ ಡಾ||ಜಯಮಾಲ ಹೆಚ್ ಎಂ ರಾಮಚಂದ್ರ ಅವರ ಪುತ್ರಿ ಸೌಂದರ್ಯ ವಿವಾಹ ರುಷಭ್ ಅವರೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಕಿಚ್ಚ ಸುದೀಪ್, ಯಶ್, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.
ಕನ್ನಡದ ಹಿರಿಯ ನಟಿ, ರಾಜಕಾರಣಿ ಜಯಮಾಲಾ ಅವರ ಪುತ್ರಿ ಸ್ಯಾಂಡಲ್ವುಡ್ ನಟಿ ಸೌಂದರ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಡಾ ಜಯಮಾಲಾ – ಹೆಚ್ ಎಂ ರಾಮಚಂದ್ರ ದಂಪತಿಯ ಪುತ್ರಿ ಸೌಂದರ್ಯ ವಿವಾಹ ಮಹೋತ್ಸವ ಇಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿದೆ. ರುಷಭ್ ಎಂಬುವರೊಂದಿಗೆ ಸೌಂದರ್ಯ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಸೌಂದರ್ಯ – ರುಷಭ್ ಅದ್ಧೂರಿ ಕಲ್ಯಾಣಕ್ಕೆ ಸ್ಯಾಂಡಲ್ವುಡ್ ತಾರೆಯರು ಸಾಕ್ಷಿಯಾಗಿದ್ದರು. ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್ ವುಡ್ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ಸೌಂದರ್ಯ – ರುಷಭ್ಗೆ ಶುಭ ಕೋರಿದರು. ಫೋಟೋ ಆಲ್ಬಂ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ನಟಿ ಸೌಂದರ್ಯ ಜಯಮಾಲಾ ಅವರ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ಜರುಗಿದೆ. ರುಷಭ್ – ಸೌಂದರ್ಯ ಜಯಮಾಲಾ ಸಪ್ತಪದಿ ತುಳಿದಿದ್ದಾರೆ. ಡಾ ಜಯಮಾಲಾ – ಹೆಚ್ ಎಂ ರಾಮಚಂದ್ರ ದಂಪತಿಯ ಪುತ್ರಿ ಸೌಂದರ್ಯ – ರುಷಭ್ ಕಲ್ಯಾಣ ವಿಜೃಂಭಣೆಯಿಂದ ನಡೆದಿದೆ. ಮುಹೂರ್ತಕ್ಕೆ ಚಿನ್ನದ ಬಣ್ಣದ ಸೀರೆ ಧರಿಸಿದ್ದರು ವಧು ಸೌಂದರ್ಯ ಜಯಮಾಲಾ. ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ವಧು ಸೌಂದರ್ಯ ಮೊಗದಲ್ಲಿ ನಗು ಅರಳಿತ್ತು.