ಕಳೆದ ಆರು ತಿಂಗಳಿನಲ್ಲಿ ರಿಲೀಸ್ ಆದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕನ್ನಡ ಪ್ರೇಕ್ಷಕ ಥೀಯೇಟರ್ಗೆ ಹೋಗಿ ಸಿನಿಮಾ ಹೆಚ್ಚು ನೋಡಿದ್ದು ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾತ್ರ, ಪರಿಸ್ಥಿತಿ ಹೀಗಿರುವಾಗ ಇಲ್ಲೊಂದು ಚಿತ್ರತಂಡ `ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಬದಲಾಗಿ ಇದು ವಿಶ್ವ ಕನ್ನಡಿಗರ ಚಿತ್ರ’ ಎಂದೆನ್ನುತ್ತಲೇ ಥೀಯೆಟರ್ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರತಂಡದ ಭರವಸೆಯಂತೆಯೇ ಸಿನಿಮಾ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಕರ್ನಾಟಕದ ಹಲವು ಥೀಯೇಟರ್ ಹೌಸ್ ಫುಲ್ ಆಗಿದೆ. ಕನ್ನಡಿಗರು ಪ್ಯಾನ್ ಇಂಡಿಯಾ ಸಿನಿಮಾ ಸಿನಿಮಾವನ್ನಷ್ಟೇ ಥೀಯೇಟರ್ಗೆ ಬಂದು ನೋಡುತ್ತಾರೆ ಅನ್ನುವುದನ್ನು ಈ ಚಿತ್ರ ಸುಳ್ಳು ಮಾಡಿದೆ. ಹೌದು, ಗಣಿ ಮತ್ತು ಭಟ್ಟರ ಕಾಂಬಿನೇಶನ್ `ಗಾಳಿಪಟ -2’ ಚಿತ್ರಕ್ಕೆ ಜನ ಫುಲ್ ಮಾರ್ಕ್ ಕೊಟ್ಟಾಗಿದೆ. ಹಾಗಾದ್ರೆ ಗಾಳಿಪಟ 2 ಸಿನಿಮಾ ಹೇಗಿದೆ? ಚಿತ್ರದ ವಿಶಿಷ್ಟ ಪಾತ್ರಗಳ ಮೂಲಕ ಭಟ್ಟರು ಹೇಳಿದ್ದಾದ್ರೂ ಏನು?
ನೀರುಕೋಟೆ ಅನ್ನೋ ಊರಿನಲ್ಲಿರೋ ಕಾಲೇಜಿನಲ್ಲಿ ಶುರುವಾಗೋ ಕಥೆ ಯುರೋಪ್, ಜರ್ಮನಿ ಹೀಗೆ ಎಲ್ಲಾ ಕಡೆ ರೌಂಡ್ ಹೊಡೆಯುತ್ತೆ. ಕನ್ನಡ ಕಲಿಯುವ ಸುದುದ್ದೇಶದಿಂದ ನೀರುಕೋಟೆ ಕಾಲೇಜಿಗೆ ಗಣಿ ಸೇರಿಕೊಂಡಿದ್ದಾನೆ. ಅವನೊಂದಿಗೆ ದಿಗಂತ್ ಹಾಗೂ ಭೂಷಣ್ ಕೂಡ ಇದ್ದಾರೆ. ಮೂವರು ಗೆಳೆಯರಿಗೆ ಕನ್ನಡ ಮೇಷ್ಟ್ರು ತಮ್ಮ ಮನೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಗಣೇಶ್, ಭೂಷಣ್ ಮತ್ತು ದಿಗಂತ್ ಈ ಮೂವರು ವಿದ್ಯಾರ್ಥಿಗಳು ಮೊದಲೇ ತರ್ಲೆಗಳು. ಕಾಲೇಜಿನಲ್ಲಿ ಇವ್ರ ತುಂಟಾಟ, ಮೋಜು-ಮಸ್ತಿ ನೋಡೋದೇ ಥ್ರಿಲ್ ಕೊಡುತ್ತೆ. ಪಂಚಿAಗ್ ಡೈಲಾಗ್ ಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ.
ಜಾಹೀರಾತು ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್; ಭೇಷ್ ಎಂದ ಫ್ಯಾನ್ಸ್
ಗಣಿಗೆ ಅದೇ ಕಾಲೇಜಿನ ಹುಡುಗಿ ಶ್ವೇತಾ (ವೈಭವಿ ಶಾಂಡಿಲ್ಯ) ಮೇಲೆ ಪ್ರೀತಿ ಉಂಟಾಗಿದೆ. ದಿಗಂತ್ಗೆ ಬ್ರೆಕ್ಅಪ್ ಮಾಡಿಕೊಂಡ ಮಾಜಿ ಗೆಳತಿ (ಸಂಮುಕ್ತ ಮೆನನ್) ಸಿಕ್ಕಿದ್ದಾಳೆ. ಅದೇ ಕಾಲೇಜಿನ ಟೀಚರ್ (ಶರ್ಮಿಲಾ ಮಾಂಡ್ರೆ) ಮೇಲೆ ಭೂಷಣ್ಗೆ ಅಪಾರವಾದ ಪ್ರೀತಿ ಉಕ್ಕಿದೆ. ಹೀಗೆ ಸಾಗುವ ಈ ಮೂವರ ಬದುಕಿನಲ್ಲಿ ಕನ್ನಡ ಮೇಷ್ಟ್ರ (ಅನಂತ್ ನಾಗ್) ಪಾತ್ರವೇ ಮಹತ್ತರ ತಿರುವು. ಮಧ್ಯಂತರದ ನಂತರ ಕಥೆ ವಿದೇಶಕ್ಕೆ ಹಾರುತ್ತದೆ. ಅದಕ್ಕೆ ಕಾರಣವೇನು? ಆ ಮೇಷ್ಟ್ರಿಗೂ ಈ ಮೂವರು ಯುವಕರಿಗೂ ಏನು ಸಂಬAಧ ಅನ್ನೋದೇ ಮುಖ್ಯ ತಿರುಳು.
ಲೊಕೇಷನ್, ದೃಶ್ಯಗಳ ವಿಚಾರಕ್ಕೆ ಬಂದಾಗ ಯೋಗರಾಜ್ ಭಟ್ ಅವರ ಕಲ್ಪನೆ, ಸಂಯೋಜನೆಗಳನ್ನು ನಿಮ್ಮನ್ನು ಎಂದೂ ನಿರಾಸೆಗೊಳಿಸದು. ಗಾಳಿಪಟ ೨ ಕೂಡಾ ಇದಕ್ಕೆ ಹೊರಾಗಿಲ್ಲ. ಮನಸುಗಳಲ್ಲಿ ಭಾವನೆಗಳನ್ನು ತುಂಬಿ ತುಳಿಕಿಸುವ ಸಿನಿಮಾ ನಿಮ್ಮ ಕಣ್ಣುಗಳಲ್ಲಿ ಮರೆಯಲಾಗದ ದೃಶ್ಯವೈಭವವನ್ನೂ ಕಟ್ಟಿಕೊಡುತ್ತದೆ.
ಸಿಲ್ವರ್ ಜ್ಯೂಬ್ಲಿ ಸಂಭ್ರಮದಲ್ಲಿ ಡಿ ಬಾಸ್: ದರ್ಶನ್ ಬಣ್ಣದ ಲೋಕದ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ
ಅಘೋರಿಯಾಗಿ ಬದಲಾಗೋ ದಿಗಂತ್ ಕಾಮಿಡಿ ಮಾತ್ರ ಸುಸ್ತಾಗುವಂತೆ ನಗಿಸುತ್ತೆ. ಕಾಮಿಡಿ ಕಚಗುಳಿ ಮಾತ್ರ ಎಂಡ್ ವರೆಗೂ ಇರುತ್ತೆ. ಆದ್ರೆ ಸ್ಟೋರಿಯಲ್ಲಿ ಬರೋ ಟ್ವಿಸ್ಟ್ ಮತ್ತು ಟರ್ನ್ ಗಳು ಕಲ್ಲು ಹೃದಯವನ್ನೂ ಕೂಡ ಕರಗಿಸಿ ಅಳಿಸಿಬಿಡುತ್ತೆ. ಕೆಲವೊಂದು ಸನ್ನಿವೇಶಗಳು ಸೀಟಿನ ತುದಿಗೆ ಕೂರಿಸುತ್ತೆ. ಈ ಸಿನಿಮಾದಲ್ಲಿ ಭಟ್ರು ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನ ಸಾರಿ ಸಾರಿ ಹೇಳಿದ್ದಾರೆ.
ಗಾಳಿಪಟ ಫೆಸ್ಟಿವಲ್ ನಲ್ಲಿ ಕಾಣೆಯಾಗೋ ಕನ್ನಡ ಮೇಷ್ಟ್ರ ನಾಲ್ಕು ವರ್ಷದ ಮಗನ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತೆ. ಸ್ವಲ್ಪವೂ ಸೀರಿಯಸ್ನೆಸ್ ಇಲ್ಲದ ಗಣೇಶ್ಗೆ ಇದ್ದಕ್ಕಿದ್ದ ಹಾಗೇ ಪ್ರಾಣ ಸ್ನೇಹಿತರಂತೆ ಇದ್ದ ದಿಗಂತ್ ಮತ್ತು ಭೂಷಣ್ ತಿರುಗಿ ಬೀಳುತ್ತಾರೆ. ಅದ್ಯಾಕೆ ಅನ್ನೋದನ್ನ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಿ.
ಬಾಲಿವುಡ್ ರಂಗೀನ್ ದುನಿಯಾದಲ್ಲಿ ಕನ್ನಡಿಗರ ಹವಾ
ಕನ್ನಡ ಅಂದ್ರೆ ಇಲ್ಲಿ ಗಣೇಶ್ಗೆ ಕಬ್ಬಿಣದ ಕಡಲೆಕಾಯಿ.. ಆದ್ರೆ ಕನ್ನಡದಲ್ಲೇ ಏನೋ ಮಾಡಲಿ ಮಗ ಅನ್ನೋದು ತಾಯಿ ಸುಧಾ ಬೆಳವಾಡಿ ಮತ್ತು ತಂದೆ ರಂಗಾಯಣ ರಘು ಆಸೆ. ತಂದೆಗೆ ಮಗನ ವರ್ತನೆಯ ಬಗ್ಗೆ ಕೊನೆಯವರೆಗೂ ಸಿಟ್ಟಿರುತ್ತೆ. ಆದ್ರೆ ಕೊನೆಯಲ್ಲಿ ಮಗ ಗಣೇಶನ ನಿಜವಾದ ಗುಣ ಗೊತ್ತಾಗಿ ಕಣ್ಣೀರು ಹಾಕುತ್ತಾರೆ. ಅಷ್ಟರಲ್ಲಿ ಗಣೇಶ್ ತಾಯಿ ಬದುಕಿನಲ್ಲಿ ಅವಘಡವೊಂದು ಸಂಭವಿಸುತ್ತದೆ.
ಆರಂಭವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ
ಸ್ನೇಹ ಅಂದ್ರೆ ಏನು ಅನ್ನೋದನ್ನ ತುಂಬಾ ಅದ್ಬುತವಾಗಿ ತೆರೆಯ ಮೇಲೆ ತೋರಿಸೋ ಪ್ರಯತ್ನ ಮಾಡಿದ್ದಾರೆ ಭಟ್ರು. ಲೊಕೇಷನ್, ದೃಶ್ಯಗಳ ವಿಚಾರಕ್ಕೆ ಬಂದಾಗ ಯೋಗರಾಜ್ ಭಟ್ ಅವರ ಕಲ್ಪನೆ, ಸಂಯೋಜನೆಗಳನ್ನು ನಿಮ್ಮನ್ನು ಎಂದೂ ನಿರಾಸೆಗೊಳಿಸದು. ಗಾಳಿಪಟ 2 ಕೂಡಾ ಇದಕ್ಕೆ ಹೊರಾಗಿಲ್ಲ. ಮನಸುಗಳಲ್ಲಿ ಭಾವನೆಗಳನ್ನು ತುಂಬಿಕಳಿಸೋ ಸಿನಿಮಾ ನಿಮ್ಮ ಕಣ್ಣುಗಳಲ್ಲಿ ಮರೆಯಲಾಗದ ದೃಶ್ಯವೈಭವವನ್ನೂ ಕಟ್ಟಿಕೊಡುತ್ತದೆ. ಸಿನಿಮಾದಲ್ಲಿ ಕಾಮೆಡಿಗೆ ನೀಡಲಾಗಿರುವ ಅಷ್ಟೇ ಪ್ರಾಧಾನ್ಯವನನ್ನು ಭಾವನೆಗಳಿಗೂ ನೀಡಲಾಗಿದೆ. ಸಿನಿಮಾ ನೋಡಿ ನೀವೆಷ್ಟೇ ನಕ್ಕರೂ ಒಂದಷ್ಟು ಭಾವನೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತದೆ. ಕೆಲವೊಂದು ತಿರುವುಗಳು, ಟ್ವಿಸ್ಟ್ಗಳು ನಿಮ್ಮನ್ನು ಭಾವುಕಗೊಳಿಸುತ್ತದೆ.
ದೃಶ್ಯ ವೈಭವ ನೋಡೋದೇ ಕಣ್ಣಿಗೆ ಆನಂದ ಮತ್ತು ಹಬ್ಬ. ಅರ್ಜುನ್ ಜನ್ಯ ಮ್ಯೂಸಿಕ್ ಬಗ್ಗೆ ಮಾತಾಡೋ ಹಾಗೇ ಇಲ್ಲ ಬಿಡಿ. `ನೀನು ಬಗೆಹರಿಯದ ಹಾಡು’ ಸಕ್ಕತ್ ಮೆಲೋಡಿ ಸಾಂಗ್. ಎಕ್ಸಾಮ್ ಸಾಂಗ್ ಕೇಳೋದೇ ಭರ್ಜರಿ ಕಿಕ್. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಾಯಕಿಯರಾಗಿ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಭಟ್ರ ಕ್ಲಾಸ್ರೂಮ್ನಲ್ಲಿ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ rank ವಿಜೇತ ವಿಧ್ಯಾರ್ಥಿ. ಒಟ್ಟಿನಲ್ಲಿ, ಸಾಲು ಸಾಲು ರಜಾದಿನಗಳಲ್ಲಿ ಭಟ್ಟರು ಬಡಿಸಿದ ಹಬ್ಬದ ಊಟವನ್ನು ಕುಟುಂಬ ಸಮೇತರಾಗಿ ಬಂದು ಸವಿಯಬಹುದು.