ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಂಭ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ದರ್ಶನ್ ನಟಿಸುತ್ತಿದ್ದ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಪ್ರೇಮ್ ಜೊತೆ ಮಾಡಬೇಕಿದ್ದ ಸಿನಿಮಾದ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೀಗ ಈ ಬಗ್ಗೆ ನಟ ಪ್ರೇಮ್ ಮಾತನಾಡಿದ್ದಾರೆ.
ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಪ್ರೇಮ್, ‘ನಾನು ಹಾಗೂ ದರ್ಶನ್ ಅಣ್ಣ-ತಮ್ಮಂದಿರು. ನಾವು ಒಂದೇ ಕುಟುಂಬದವರು. ನಾನು ಮೊದಲ ಬಾರಿಗೆ ದರ್ಶನ್ಗಾಗಿ ‘ಕರಿಯ’ ಸಿನಿಮಾ ಮಾಡಿದಾಗ ಆಗ ನಾವು ಪರಿಚಯದವರು ಅಷ್ಟೆ ಆದರೆ ಪತ್ನಿ ರಕ್ಷಿತಾ ಅವರಿಗೆ ಅದಾಗಲೇ ಅವರು ಬಹಳ ಆತ್ಮೀಯ ಗೆಳೆಯರು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುವ ಗೆಳೆಯರು. ನನಗೂ ಸಹ ದರ್ಶನ್ ಅವರು ಬಹಳ ಆಪ್ತರು’ ಎಂದಿದ್ದಾರೆ ಪ್ರೇಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ “ಮ್ಯಾಕ್ಸ್”; ಡಿಸೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆ.
ದರ್ಶನ್ ಹಾಗೂ ನಾನು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಹಲವು ವರ್ಷದಿಂದ ಕೇಳುತ್ತಲೇ ಇದ್ದರು. ಹಾಗಾಗಿ ನಾನು ಖಂಡಿತ ದರ್ಶನ್ಗೆ ಸಿನಿಮಾ ಮಾಡುತ್ತೀನಿ. ಅದರಲ್ಲಿ ಅನುಮಾನವೇ ಬೇಡ. ಎಲ್ಲರೂ ಒಂದೇ ಕುಟುಂಬದ ರೀತಿ. ದರ್ಶನ್ ಅವರು ಆರೋಗ್ಯವಾಗಿದ್ದಿದ್ದರೆ ನಾನೇ ಅವರನ್ನು ಕರೀತಿದ್ದೆ. ಈ ಸಿನಿಮಾದ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸುತ್ತಿದ್ದೆ. ಆದರೆ ಅವರಿಗೆ ಬೆನ್ನು ನೋವು ಇರುವ ಕಾರಣ ಈಗ ಬೇಡ ಎಂದುಕೊಂಡೆ. ಮುಂದಿನ ದಿನಗಳಲ್ಲಿ ಅವರನ್ನು ಕರೆಯುತ್ತೀನಿ. ನನಗಾಗಲಿ, ರಕ್ಷಿತಾ, ಧ್ರುವ ಅವರಿಗಾಗಲಿ ಎಲ್ಲರಿಗೂ ಬೆಂಬಲ ಕೊಡುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.
ದರ್ಶನ್ ಈಗ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಬಳಿಕ ಪ್ರೇಮ್ ನಿರ್ದೇಶನದ ನಟಿಸಲು ಒಪ್ಪಿಗೆ ನೀಡಿದ್ದರು. ಪ್ರೇಮ್ ಹಾಗೂ ದರ್ಶನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ರೇಣುಕಾ ಸ್ವಾಮಿ ಪ್ರಕರಣ ನಡೆದ ಕಾರಣ ‘ಡೆವಿಲ್’ ಸಿನಿಮಾದ ಚಿತ್ರೀಕರಣ ನಿಂತು ಹೋಗಿದೆ. ಕೆಲ ಮಾಹಿತಿಯ ಪ್ರಕಾರ, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭ ಆಗಲಿದೆಯಂತೆ. ಅದಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ದರ್ಶನ್ ನಟಿಸುವ ಸಾಧ್ಯತೆ ಇದೆ.