Sandalwood Leading OnlineMedia

Chittara Star Awards-2025; ಡಾ||ವಿ.ನಾಂಗೇದ್ರ ಪ್ರಸಾದ್ ಪಾಲಯ್ತು `ಅತ್ಯುತ್ತಮ ಗೀತರಚನೆಕಾರ’ ಪ್ರಶಸ್ತಿ

`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, Sri.V.Nagendra Prasad ಅವರು Chittara Best Lyric Writer -2025 ‘ ಪ್ರಶಸ್ತಿಗೆ ಭಾಜನರಾಗಿದ್ದಾರೆ.

“ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರು ಅಮ್ಮ ನೀನೇ ದೈವ ಎಂದು ಕಾಲ ಮುಗಿದರೋ” ಎಕ್ಸ್ಕ್ಯೂಸ್ ಮಿ ಚಿತ್ರದ ತಾಯಿಯ ಕುರಿತಾದ ಈ ಅದ್ಭುತ ರಚನೆ ನಂಬರ್ ಒನ್ ಲಿರಿಕ್ ರೈಟರ್ ವಿ ನಾಗೇಂದ್ರ ಪ್ರಸಾದ್ ಅವರ ಬತ್ತಳಿಕೆಯ ಹಾಡು.2000 ಇಸವಿಯ ಗಾಜಿನ ಮನೆ ಎಂಬ ಚಿತ್ರದಿಂದ ಪ್ರಾರಂಭವಾದ ಇವರ ಗೀತ ರಚನೆಯ ಪಯಣ ಕೃಷ್ಣಂ ಪ್ರಣಯ ಸಖಿ ಚಿತ್ರದವರೆಗೂ ಅದ್ಭುತವಾಗಿ ಸಾಗುತ್ತ ಬಂದಿದೆ. ಅವರು ಬರೆಯದ ಹಾಡಿನ ಜಾನರ್ ಇಲ್ಲ, ಪ್ರೇಮಗೀತೆ, ಭಕ್ತಿಗೀತೆ, ತಾಯಿ ಹಾಡು, ತಂದೆ- ತಮ್ಮ- ತಂಗಿಯ ಬಗ್ಗೆ ಬರೆದು ಅನೇಕ ಹಿಟ್ ಹಾಡುಗಳನ್ನು ತಮ್ಮ ತೆಕ್ಕೆಯಲ್ಲಿ ಹಾಕಿಕೊಂಡ ಲೆಜೆಂಡರಿ ಲಿರಿಕ್ ರೈಟರ್. ಇಳಯರಾಜ, ಹಂಸಲೇಖರಿ0ದ ಹಿಡಿದು.. ಇಂದಿನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ವರೆಗೂ ಎಲ್ಲಾ ಸಂಗೀತ ನಿರ್ದೇಶಕರ ಚಿತ್ರ ನಿರ್ದೇಶಕರ ನೆಚ್ಚಿನ ಕವಿರತ್ನ ವಿ ನಾಗೇಂದ್ರ ಪ್ರಸಾದ್. ಗೀತ ಸಾಹಿತಿ, ಡೈಲಾಗ್ ರೈಟರ್ ಕೂಡ ಅಲ್ಲದೆ ಅನೇಕ ಸಿನಿಮಾಗಳ ನಿರ್ದೇಶಕರು ಹೌದು. ಇವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಚಿತ್ತಾರವು ಅಭಿನಂದಿಸುತ್ತ ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ಗೀತ ರಚನೆಗೆ ಚಿತ್ತಾರವು Chittara Best Lyric Writer -2025 ಪ್ರಶಸ್ತಿ ನೀಡಿ ಗೌರವಿಸಿದೆ.

 

 

 

 

Share this post:

Translate »