Sandalwood Leading OnlineMedia

ಸಂಘರ್ಷದ ಏರಿ ಮೇಲೆ `ಕರಿ ಕುರಿ’! ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವಿಭಿನ್ನ ಕಥಾಹಂದರದ ಚಿತ್ರ.

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ನಿಜಕ್ಕೂ ಸುಲಭದ ಮಾತಲ್ಲ. ಏಕೆಂದರೆ ಪ್ರೇಕ್ಷಕನಿಗೆ ಕುಳಿತಲ್ಲೇ ಸಿನಿಮಾವನ್ನು ನೋಡುವ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಚಿತ್ರತಂಡ ಪ್ರೇಕ್ಷಕನನ್ನು ಸಿನಿಮಾ ಮಂದಿರಕ್ಕೆ ಕರೆತರಲು ವಿಭಿನ್ನ ರೀತಿಯಲ್ಲಿ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ `ಬ್ಲಾಕ್ ಶೀಪ್ಚಿತ್ರತಂಡ ಹೊಸ ರೀತಿಯ ಯೋಚನೆ ಮತ್ತು ಯೋಜನೆಯ ಮೂಲಕ ಪ್ರೇಕ್ಷಕ ಮುಂದೆ ಬರಲಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ:  *”ಈ ಪಟ್ಟಣಕ್ಕೆ ಏನಾಗಿದೆ”. ಆಗಸ್ಟ್ ನಲ್ಲಿ ಬಿಡುಗಡೆಯಾಗುತ್ತಿದೆ* .

ಮೂಲತ: ಡ್ಯಾನ್ಸರ್ ಹಾಗೂ `ದೇವ್-ಸನ್ ಆಫ್ ಮುದ್ದೇಗೌಡಚಿತ್ರದಲ್ಲಿ ಚಾರ್ಮಿ ಕೌರ್‌ಗೆ ಜೋಡಿಯಾಗಿದ್ದ ಜೀವನ್ ಹಳ್ಳಿಕಾರ್ ಈ ಸಿನಿಮಾಕ್ಕೆ ರಚನೆ, ಚಿತ್ರಕಥೆ, ನಿರ್ದೇಶನ ಜತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. `ಗ್ಲಿಟರ‍್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಮೂಲಕ ಅಶ್ವಿನಿ ಗುರುಚರಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಂಜುನಾಥ್.ಪಿ.ರಾವ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

 

ಇದನ್ನೂ ಓದಿ: *ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿ ಸತ್ಯರಾಜ್…’ಆರ’ ಸಿನಿಮಾ ಗುಂಗಿನಲ್ಲಿ ಪ್ರತಿಭಾನ್ವಿತ ಕಲಾವಿದ*

`ಕಥೆಯು ನಾಯಕ ಮತ್ತು ಖಳನಾಯಕನ ನಡುವೆ ಒಂದು ಸಂಘರ್ಷ ಏರ್ಪಟ್ಟಾಗ, ಆ ಸಂಘರ್ಷದಲ್ಲಿ ಕೆಲ ಘಟನೆಗಳನ್ನು ಮರೆತು ಹೇಗೆ ಜೀವನ ಸಾಗಿಸುತ್ತಾರೆ. ಆ ಮರೆತ ವಿಷಯಗಳು ಅವರಿಗೆ ಜೀವನದ ಉದ್ದೇಶವನ್ನು ಅರಿಯುವಲ್ಲಿ ಹೇಗೆ ಸಹಾಯ ಮಾಡುತ್ತದೆ.. ಹಾಗೂ ಕುತೂಹಲದಿಂದ ಕೂಡಿದ ಅವರಿಬ್ಬರ ಹಾದಿಯಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳೇನು.. ಎಂಬುವುದನ್ನು ಚಿತ್ರ ತೆರೆದಿಡಲಿದೆ. 

 

ವಿಶಾಲ್ ಕಿರಣ್, ಪ್ರಶಾಂತ್.ವಿ.ಹರಿ, ನಿಶಾ ಹೆಗ್ಡೆ, ಶಿವಾಂಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಹೆಬ್ಬಾಳೆ, ಕೆ.ಎಸ್.ಶ್ರೀಧರ್, ಸುಂದರ್ ವೀಣಾ, ಭಜರಂಗಿ ಪ್ರಸನ್ನ ಮುಂತಾದವರು ಚಿತ್ರದ ಇತರೆ ತಾರಾಗಣದಲ್ಲಿದ್ದಾರೆ. ಅಭಿಜಿತ್ ಮಹೇಶ್ ಸಾಹಿತ್ಯದ ಗೀತೆಗಳಿಗೆ ಪೀಪಲ್ ಶ್ರೀ ಸಂಗೀತ ಸಂಯೋಜಿಸಿದ್ದಾರೆ. ದೇವೂ ಛಾಯಾಗ್ರಹಣ, ಆಕಾಶ್ ಎಸ್.ಮಹೇಂದ್ರಕರ್ ಸಂಕಲನ, ಅವತಾರ್ ಆದಿತ್ಯ ಸಾಹಸ ಈ ಚಿತ್ರಕ್ಕಿದೆ.

Share this post:

Translate »