Sandalwood Leading OnlineMedia

`ಹೊಂದಿಸಿ ಬರೆಯಿರಿ’ ಚಿತ್ರದ ಸಂಭಾಷಣೆಗಾಗಿ `ಚಿತ್ತಾರ ಅತ್ಯುತ್ತಮ ಸಂಭಾಷಣೆಗಾರ’ ಪ್ರಶಸ್ತಿ ಪಡೆದ ಪ್ರಶಾಂತ್ ರಾಜಪ್ಪ\CHITTARA EXCLUSIVE

ಸಿನಿಮಾ ಅನ್ನೋ ಮನೋರಂಜನೆ ಜೊತೆ ಜೊತೆಗೆ ಸಂದೇಶವನ್ನು ಸಾರುವ  ಮಾಧ್ಯಮದಲ್ಲಿ ಸಂಭಾಷಣೆಕಾರನ ಪಾತ್ರ ಬಹು ಮುಖ್ಯವಾದದ್ದು. ಆತ ಬರೆಯುವ ಒಂದೊ0ದು ಸಂಭಾಷಣೆಯೂ ಚಿತ್ರದ ಪಾತ್ರಗಳು ಪ್ರೇಕ್ಷಕನಿಗೆ ಹತ್ತಿರವಾಗುವಂತೆ ಮಾಡಬಲ್ಲುದು. ಕೆಲವೊಂದು ಸಂಭಾಷಣೆಗಳು ನೋಡುಗನ ಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬಲ್ಲುದು, ಚಿತ್ರ ಸಂಭಾಷಣೆಗೆ ಆ ಶಕ್ತಿ ಇದೆ. ಕನ್ನಡ ಚಿತ್ರ ರಸಿಕರ ಗಮನ ಸೆಳೆದ `ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಅವರು ತಮ್ಮ ಸಂಭಾಷಣೆಯ ಮೂಲಕ ವಿಶೇಷ ಮಾನ್ಯತೆಯನ್ನು ತಂದುಕೊಟ್ಟಿದ್ದರು.  ಈ ಚಿತ್ರದ ಸಂಭಾಷಣೆಗಾಗಿ  ಪ್ರಶಾಂತ್ ರಾಜಪ್ಪ ಅವರಿಗೆ BEST DIALOGUE WRITER-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಶಾಂತ್ ರಾಜಪ್ಪ, `ಚಿತ್ತಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಕೆಲಸವನ್ನು ಗುರುತಿಸಿ ಅವಾರ್ಡ್ ನೀಡಿದ್ದಕ್ಕೆ. ಈ ಅವಾರ್ಡ್ ಪಡೆದುಕೊಂಡಿದ್ದು ತುಂಬಾ ಖುಷಿ ಆಯ್ತು. ಹಾಗೇ ಸಿನಿಮಾದಲ್ಲಿನ ನಾನು ಬರೆದ ಸಂಭಾಷಣೆಯನ್ನು ಮೆಚ್ಚಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ.

Share this post:

Translate »