ನಿರ್ದೇಶನ: ಪ್ರವೀಣ್ ಕುಮಾರ್ ಜಿ.
ತಾರಾಗಣ: ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ, ಬಲರಾಜವಾಡಿ, ಕೃತಿ ಭಟ್, ಮಹೇಶ್ ಬಂಗ್, ಮಂಜಮ್ಮ ಜೋಗತಿ
ರೇಟಿಂಗ್: 3
ಇತ್ತೀಚಿನ ದಿನಗಳಲ್ಲಿ ನಾವು ಉತ್ತಮ ಕಂಟೆ0ಟ್ ಸಿನಿಮಾಗಳ ಬಗ್ಗೆ ಮಾತನಾಡುವಾಗ, ಮಲಯಾಳಂ ಸಿನಿಮಾಗಳ ಪಟ್ಟಿಯನ್ನೇ ಕೊಟ್ಟು ಬಿಡುತ್ತೇವೆ. ಆದರೆ, ಈಗ ಸಮಯ ಬದಲಾಗ್ತಾ ಇದೆ. ಕನ್ನಡದಲ್ಲೂ ಕಂಟೆAಟ್ ಸಿನಿಮಾಗಳು ಸದ್ದು ಮಾಡುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ ಸೇರುವ ಚಿತ್ರ `ಅಮರ ಪ್ರೇಮಿ ಅರುಣ್’.
ಕೆಲವು ಕತೆಗಳು ಅದ್ಭುತವಾಗಿದ್ದರೂ, ಕತೆ ಸಿನಿಮಾ ರೂಪ ಪಡೆಯುವಾಗ ಬರವಣಿಗೆಯ ಗಟ್ಟಿತವನ್ನು ಕಳೆದುಕೊಳ್ಳುತ್ತದೆ. ಆದರೆ, ಮೂಲತಃ ಸಾಹಿತ್ಯಾಸಕ್ತಿಯಾದ ನಿರ್ದೇಶಕ ಪ್ರವೀಣ್, ಬರವಣಿಗೆಯಲ್ಲಿ ಅಂದುಕೊ0ಡದ್ದನ್ನು ತೆರೆಯ ಮೇಲೆ ಸಾಧಿಸಿ ತೋರಿಸಿದ್ದಾರೆ. ಪ್ರವೀಣ್ ಕನಸಿಗೆ ಕಲಾವಿದರು ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಹರಿ ಶರ್ವ, ದೀಪಿಕಾ ಆರಾಧ್ಯ, ಧರ್ಮಣ್ಣ ಎಷ್ಟು ಸಹಜವಾಗಿ ನಟಿಸಿದ್ದಾರೆ ಎಂದರೆ ತೆರೆಯ ನಮ್ಮದೇ ಕಥೆ ತೆರೆದುಕೊಳ್ಳುವ ಭಾಸವಾಗುತ್ತಾದೆ. ಯಾವುದೇ ಎಕ್ಟಾç ಮಸಾಲೆ ಇಲ್ಲದ, ಒಬ್ಬ ಸೀದಾ ಸಾದ `ಸಿರಪ್-ಗುಳಿಗೆ’ ಮಾರುವವನ ಕಥೆಯನ್ನು ನಿರ್ದೇಶಕರು ಅತ್ಯಂತ ಸಹಜವಾಗಿ ಹೇಳುತ್ತಾ ಹೋಗುತ್ತಾರೆ.
ಪ್ರವಿಣ್ಗೆ ಒಬ್ಬ ಜಿಗಿರಿ ದೋಸ್ತ್, ಬಳ್ಳಾರಿ ಸೀನ. ಸೀನುವಾಗಿ ಧರ್ಮಣ್ಣ, ಸೀನಿದಷ್ಟೆ ಸಹಜವಾಗಿ ಅಭಿನಯಿಸುತ್ತಾ, ನಗೆಯ ಕಚಗುಳಿ ನೀಡುತ್ತಾರೆ. ಧರ್ಮಣ್ಣ ತೆರೆಯ ಮೇಲೆ ಬಂದಾಗಲೆಲ್ಲಾ ನೋಡುಗ ಹರ್ಷ ಪಡುತ್ತಾನೆ. ಕಥೆಯಲ್ಲಿ ಪ್ರವೀಣನ ದೈನಂದಿನ ಬದುಕು ತೆರೆದುಕೊಂಡು, ಹರೆಯದ ಹುಡುಗರ ಪ್ರೇಮ-ಪ್ರಣಯದ ಕಥೆ ಎದುರಾಗುತ್ತದೆ. ಅಂಥಾ ಹೊತ್ತಲ್ಲಿ ನಾಯಕನಿಗೊಂದು `ಓಲ್ಡ್ ಲವ್ ಸ್ಟೋರಿ’ ಇರುವುದು ಬಯಲಿಗೆ ಬಂದು ಕತೆಗೊಂದು ಟ್ವಿಸ್ಟ್ ದಕ್ಕುತ್ತದೆ. ಆಮೇಲೊಂದು ತ್ಯಾಗ, ವಿಷಾದ, ಪ್ರಮಾದ, ವಿನೋದ.. ಎಲ್ಲವೂ ಒಂದೊ0ದಾಗಿಯೇ ಎದುರಾಗುತ್ತದೆ. ಮಧ್ಯಮ ವರ್ಗದ ಕುಟುಂಬ ವರ್ಗದ ಪ್ರತಿಯೊಬ್ಬರ ಆಸೆ, ಆಕಾಂಕ್ಷೆಗಳ ಮೂಲಕ ಕತೆ ಕಟ್ಟಿದ್ದಾರೆ ನಿರ್ದೇಶಕರು. ಅವರ ನಿರೀಕ್ಷೆ, ಸಂಕಷ್ಟಗಳೇ ಕತೆಯನ್ನು ಇಂಟ್ರೆಸ್ಟಿ0ಗ್ ಆಗಿ ಮುಂದಕ್ಕೆ ಕರೆದುಕೊಂಡು ಹೋಗುತ್ತವೆ.
ಇಲ್ಲಿ ಪರಿಸ್ಥಿತಿಯೇ ಭಯಂಕರ ವಿಲನ್. ಅಂತಹ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಹೆಣೆಯಲಾಗಿದೆ. ನಾಯಕನ ಕತೆಯನ್ನು ನೋಡಿದರೆ ಆಗಾಗ ನಮ್ಮ ಗೆಳೆಯರ ಗುಂಪಿನ `ದೇವದಾಸರು’ ನೆನಪಾಗುತ್ತಾರೆ. ಹರಿ ಶರ್ವ ನಟನೆ ಹುಬ್ಬೇರುಸುವಂತಿದೆ. ಕನ್ನಡಕೊಬ್ಬ `ನೈಜ ನಟ’ ದಕ್ಕಿದ್ದಾನೆ. ದುಃಖದ ಸನ್ನಿವೇಶಗಳಲ್ಲಿ ಹರಿ ಪಾತ್ರವಾಗಿ ಜೀವಿಸಿದ್ದಾರೆ. ದೀಪಿಕಾ ಆರಾಧ್ಯ, ಹರಿ ಶರ್ವ ಅವರ ಸಹಜ ನಟನೆಗೆ ಪೈಪೋಟಿ ಕೊಡಲು ಪ್ರಯತ್ನಿಸಿದ್ದಾರೆ. ಇನ್ನು, ಕೃತಿ ಭಟ್ ಫಸ್ಟ್ ಹಾಫ್ಗಿಂತ ಸೆಕೆಂಡ್ ಆಫ್ನಲ್ಲಿ ಹೆಚ್ಚು ಇಷ್ಟವಾಗುತ್ತಾರೆ.
ಚಿತ್ರಕತೆಯಲ್ಲಿ ಬರುವ ಡಾಕ್ಟರ್ ಪಾತ್ರ ಪೋಷಣೆ, ಪ್ರೇಮಿಗಳು `ಓಡಿ ಹೋಗುವುದು’, ಇಂದಿಗೂ ಜಾರಿಯಲ್ಲಿರುವ `ಚೊಂಬು ಬಹಿರ್ದೆಸೆ’, `ಹೆಲ್ಮೆಟ್’ ಕಡ್ಡಾಯ!, ಉಪ್ಪಿಟ್ಟು ಕನೆಕ್ಷನ್, ಬಿಸಿ-ತಂಗಳು ಚಿತ್ತಾನ್ನ, ಬೆಟ್ಟದ ಮೇಲಿನ ಗಾಳಿ, `ಸ್ವಿಚ್ ಆಫ್’ ಅನ್ನೋದು ಕನ್ನಡದಲ್ಲೇ ಇರೋದು.. ಹೀಗೆ ಸಾಕಷ್ಟು ಕುಸುರಿ ಕೆಲಸಗಳು ಇಷ್ಟವಾಗುತ್ತವೆ.
ತಾಂತ್ರಿಕವಾಗಿ ನೋಡುವುದಾದರೆ, ಕಿರಣ್ ರವೀಂದ್ರ ನಾಥ್ ಸಂಗೀತ ನಿರ್ದೇಶಕರ ನರೇಶನ್ ಪ್ಯಾಟರ್ನ್ಗೆ ಹೆಚ್ಚು ಸೂಕ್ತವಾಗಿದ್ದು, ಪ್ರವೀಣ್ ಕ್ಯಾಮರಾ ಕಣ್ಣಲ್ಲಿ ಬಳ್ಳಾರಿ ಸೂಪರ್. ಪ್ರಸಾದನ ಮಾಡಿರುವ ಪ್ರಕಾಶಪ್ಪ ದೀಪಿಕಾ ಆರಾಧ್ಯರನ್ನು ಇನ್ನಷ್ಟು ಸಹಜವಾಗಿ ತೋರಿಸಬಹುದಿತ್ತು. ರೋಡ್ ಸೈಡ್ ವಿಲೇಜ್ ತಂಡದ ಸಹಜ-ಸರಳ ಪೋಸ್ಟರ್ ಡಿಸೈನ್ಗಳನ್ನು ಮರೆಯುವಂತಿಲ್ಲ. ಇನ್ನು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮತ್ತು ನಿರ್ದೇಶಕರ ಸಾಹಿತ್ಯ ಸಿನಿಮಾಕ್ಕೊಂದು ಕ್ಲಾಸಿಕಲ್ ಟಚ್ ನೀಡಿದೆ.
ಒಟ್ಟಿನಲ್ಲಿ, `ಅಮರ ಪ್ರೇಮಿ ಅರುಣ್’ ಕುಟುಂಬ ಸಮೇತರಾಗಿ ಖುಷಿಯಿಂದ ನೋಡುವಂತಹ ಸಿನಿಮಾ. ಸಾಕಷ್ಟು ಹೊಸಬರ ಚಿತ್ರಗಳಲ್ಲಿ ಯುವ ಜನಾಂಗಕ್ಕೆ ಒಂದು ಸಂದೇಶವಿರುತ್ತದೆ, ಆದರೆ ಈ ಚಿತ್ರದಲ್ಲಿ ಪೋಷಕರಿಗೂ ಒಂದು ದೊಡ್ಡ ಸಂದೇಶವಿದೆ. ಅದನ್ನು ಸಿನಿಮಾದಲ್ಲೇ ಹುಡುಕಿಕೊಳ್ಳುವುದು ಉತ್ತಮ. ಚೊಚ್ಚಲ ನಿರ್ದೇಶನದಲ್ಲೇ ತಾನು ಹೇಳಬೇಕಾದುದ್ದನ್ನು ಗಟ್ಟಿಯಾಗಿ, ದಿಟ್ಟವಾಗಿ ಹೇಳಿರುವ ಪ್ರವೀಣ್ ಅವರ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹೌದು, ಅಷ್ಟಕ್ಕೂ ಪ್ರವೀಣ್ ಅಮರ ಪ್ರೇಮಿ ಯಾಕೆ?