# Tags

ರಶ್ಮಿಕಾ ಮಂದಣ್ಣoಗೆ ಆದ `ಮಹಾ’ ಮೋಸ ಸಮಂತಾಗೂ ಆಯ್ತಾ?!

ಸಮಂತಾ ನಟನೆಯ ‘ಖುಷಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ ಚಿತ್ರದಲ್ಲಿ ಸ್ಯಾಮ್ ರೊಮ್ಯಾನ್ಸ್ ಮಾಡಿದ್ದಾರೆ. ಈ ವಾರ ಸಿನಿಮಾ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸುತ್ತಿದೆ. ವಿಜಯ್ ದೇವರಕೊಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಮಂತಾ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಸ್ಯಾಮ್‌ಗೆ ಖುದ್ದು ಮ್ಯಾನೇಜರ್ ಮೋಸ ಮಾಡಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣಗೆ ಆಕೆಯ ಮ್ಯಾನೇಜರ್ ಮೋಸ ಮಾಡಿದ್ದ ವಿಚಾರ ಬಯಲಾಗಿತ್ತು. ಬಳಿಕ ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದು ಹಾಕಿದ್ದರು. ಈ […]

ವಿಕ್ಕಿ ವರುಣ್ – ಧನ್ಯಾ ರಾಮಕುಮಾರ್ ಅಭಿನಯದ “ಕಾಲಾಪತ್ಥರ್” ಚಿತ್ರದಲ್ಲಿ ಹಾಡುಗಳ ದಿಬ್ಬಣ್ಣ .

” ಸೌಂಡ್ಸ್ ಆಫ್ ಕಾಲಾಪತ್ಥರ್” ಹೆಸರಿನಲ್ಲಿ ಚಿತ್ರದ ಅಷ್ಟು ಹಾಡುಗಳನ್ನು ಪರಿಚಯಿಸಿದ ಚಿತ್ರತಂಡ . ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್” ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಯಿತು. ಸಮಾರಂಭದ […]

ಸಿನಿಮಾಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ವಿಧ -ಕಾಸರಗೋಡು ಚಿನ್ನಾ “ಕೊರಮ್ಮ” ಸಿನಿಮಾ 25 ದಿನಗಳ ಸಂಭ್ರಮ

ಸುರತ್ಕಲ್: “ಸಿನಿಮಾಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸಿನಿಮಾ ಅನ್ನೋ ಎರಡು ವಿಧ ಬಿಟ್ಟರೆ ಆರ್ಟ್ ಮತ್ತು ಕಮರ್ಷಿಯಲ್ ಅನ್ನೋ ಪ್ರತ್ಯೇಕ ವಿಧ ಇಲ್ಲ. ‘ಕೊರಮ್ಮ’ ಸಿನಿಮಾ ಮೂಲಕ ಶಿವಧ್ವಜ್ ಅವರು ಒಂದೊಳ್ಳೆ ಸಿನಿಮಾ ಪ್ರೇಕ್ಷಕರಿಗೆ ನೀಡಿದ್ದಾರೆ. ಒಂದು ಪ್ರಶಸ್ತಿ ಪಡೆಯಲು ಸಿನಿಮಾಕ್ಕೆ ಏನೆಲ್ಲಾ ಬೇಕೋ ಅದೆಲ್ಲಾ ಪ್ರಯತ್ನವನ್ನು ಕೂಡ ಶಿವಧ್ವಜ್ ಮಾಡಿದ್ದಾರೆ. ಕ್ಲೈಮಾಕ್ಸ್ ಅನ್ನು ಅಧ್ಭುತವಾಗಿ ಕಟ್ಟಿಕೊಟ್ಟಿರುವ ಚಿತ್ರತಂಡ, ಕೊರಮ್ಮ ಪಾತ್ರಧಾರಿ ಮೋಹನ್ ಶೇಣಿ, ಕೊರಮ್ಮನ ಪತ್ನಿಯ ಪಾತ್ರ, ರೂಪಾ ವರ್ಕಾಡಿ, ಲಕ್ಷ್ಮಣ ಮಲ್ಲೂರು, ಗುರುಹೆಗ್ಡೆ ಅವರ […]

BHAVANA RAO EXCLUSIVE INTERVIEW; ಭಾವನಾ ಭಾವ ತರಂಗ

ಕಲೆಯ ಬೇರಿನ ಬಳ್ಳಿಯಲ್ಲಿ ಕಲೆಯ ಎಲೆಯೆ ಕುಡಿಯೊಡೆಯುವುದು ಅನ್ನುವ ಮಾತು ಸತ್ಯ. ಭಾವನ ರಾವ್ ಮನೆಯಲ್ಲಿ ಯಾರಿಗೂ ಸಿನಿಮಾ ನಂಟಿರಲಿಲ್ಲಾ ನಿಜ, ಆದರೆ ಕಲೆಯ ನಂಟಿತ್ತು. ಭಾವನಾ ತಾಯಿ ಖುದ್ದು ಭರತ ನಾಟ್ಯ ಕಲಾವಿದೆ, ಅದೇ ಕಲೆಯ ನಂಟು ಭಾವನಾರನ್ನು ಭರತ ನಾಟ್ಯ ಕಲಿಯಲು ಪ್ರೇರೇಪಿಸಿತು. ತನ್ನ ಐದನೇ ವಯಸ್ಸಿಗೇ ಭರತನಾಟ್ಯ ಕಲಿಯೊಕೆ ಶುರುಮಾಡಿದರು. ನೃತ್ಯ ಮಾಡುತಿದ್ದ ಕಾಲ್ಗಳು ಚಂದನವನದ ದಾರಿ ಹುಡುಕುತಿದ್ದರೆ  ಕಂಗಳು ನಟಿಯಾಗುವ ಕನಸು ಹೊತ್ತು ಕುಣಿಯುತಿತ್ತು. ಭರತ ನಾಟ್ಯದಲ್ಲಿ ಮುಖಭಾವವನ್ನು, ನಾಟ್ಯ ರಸದೊಂದಿಗೆ […]

“ಬಾನ ದಾರಿಯಲಿ” ಚಿತ್ರದ ಟ್ರೇಲರ್ ಗೆ ಪ್ರಶಂಸೆಯ ಮಹಾಪೂರ ..

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ “ಬಾನ ದಾರಿಯಲಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು. ಇನ್ನೂ ಓದಿ  Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..! […]

ಗಣೇಶ ಹಬ್ಬಕ್ಕೆ ಯಶ್‌19 ಅಪ್‌ಡೇಟ್ ಫಿಕ್ಸ್!? ಅಭಿಮಾನಿಗಳ ಕಾತರಕ್ಕೆ ತರೆ ಬೀಳುತ್ತಾ?

ರಾಕಿಭಾಯ್ ಮುಂದಿನ ಸಿನಿಮಾ ಯಾವ್ದು? ಇದು ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. KGF-2 ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷ ಕಳೆದರೂ ಯಶ್‌19 ಅಪ್‌ಡೇಟ್ ಮಾತ್ರ ಸಿಗಲೇಯಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಪರಿ ಪರಿಯಾಗಿ ರಾಕಿಂಗ್ ಸ್ಟಾರ್ ನೆಕ್ಸ್ಟ್‌ ಪ್ರಾಜೆಕ್ಟ್ ಅಪ್‌ಡೇಟ್ ಕೇಳಿ ಕೇಳಿ ಸುಮ್ಮನಾಗಿದ್ದಾರೆ. ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಲೈನ್‌ಅಪ್ ಮಾಡಿಕೊಂಡಿರುತ್ತಾರೆ. ಆದರೆ ಯಶ್ ಮಾತ್ರ ನಾಲ್ಕೈದು ವರ್ಷಗಳಿಂದ ತಮ್ಮ ಮುಂದಿನ ಸಿನಿಮಾ ಕಥೆ ಫೈನಲ್ […]

ಸೂರ್ಯನ ಹೋರಾಟಕ್ಕೆ ಟೀಸರ್ ಬಲ

ಈಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಮ್ಮ ನಿರ್ದೇಶಕರುಗಳು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ಥರದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಎನ್ನುವ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಬಿ.ಸುರೇಶ್ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೇಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ […]

ಶೀಘ್ರದಲ್ಲೇ ತೆರೆಯ ಮೇಲೆ ಚಿರಂಜೀವಿ ಸರ್ಜಾ ಅಭಿನಯದ “ರಾಜಮಾರ್ತಂಡ”

ತಮ್ಮ‌ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅಣ್ಣನ ಚಿತ್ರ ಬಿಡುಗಡೆ .ತಮ್ಮ ನಟನೆಯಿಂದ ಜನಮನ ಗೆದ್ದ ನಟ ಚಿರಂಜೀವಿ ಸರ್ಜಾ. ಚಿಕ್ಕ ವಯಸ್ಸಿನಲ್ಲೇ ಅವರು ಎಲ್ಲರನ್ನೂ ಬಿಟ್ಟು ಹೋಗಿದ್ದು ನೋವಿನ ವಿಷಯ.ಚಿರು ತಮ್ಮ ನಿಧನಕ್ಕೂ ಮುಂಚೆ “ರಾಜಮಾರ್ತಾಂಡ” ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರೀಕರಣ ಸಹ ಮುಕ್ತಾಯವಾಗಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು‌. ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ(ಡಬ್ಬಿಂಗ್) ನೀಡಿದರು. ಚಿತ್ರವನ್ನು ಪೂರ್ಣ ಮಾಡಲು ಮೇಘನಾರಾಜ್ ಸರ್ಜಾ ಅವರು ನೀಡಿದ ಸಹಕಾರ ಮರೆಯುವ ಹಾಗಿಲ್ಲ. ಶಿವಕುಮಾರ್ ಅವರು ನಿರ್ಮಿಸಿರುವ, […]

ಸೆಪ್ಟೆಂಬರ್ 15 ರಂದು “ಪರಿಮಳಾ ಡಿಸೋಜ” ಚಿತ್ರ ಬಿಡುಗಡೆ .

  ವಿಲೇಜ್ ರೋಡ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ವಿನೋದ್ ಶೇಷಾದ್ರಿ ಅವರು ನಿರ್ಮಿಸಿರುವ ಹಾಗೂ ಡಾ.ಗಿರಿಧರ್ ಹೆಚ್ ಟಿ ಅವರ ನಿರ್ದೇಶನದ, ಬಹು ತಾರಾಗಣದ ಹಾಗೂ ಬಹು ನಿರಿಕ್ಷೇಯ “ಪರಿಮಳ ಡಿಸೋಜಾ” ಕನ್ನಡ ಚಲನಚಿತ್ರವನ್ನು ಇತ್ತೀಚಿಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಿ U/A ಪ್ರಮಾಣ ಪತ್ರವನ್ನು ನೀಡಿದೆ. ಚಿತ್ರ ಸೆಪ್ಟೆಂಬರ್ 15 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಪರಿಮಳ ಡಿಸೋಜಾ ಚಿತ್ರದ ಟ್ರೈಲರ್ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹತ್ತು ಲಕ್ಷಕ್ಕೂ ಅಧಿಕ […]

  • 1
  • 2
Translate »