Sandalwood Leading OnlineMedia

ಕಟ್ಲೆಯ ಕಟೆಕಟೆಯೊಳಗೆ ಸಸ್ಪೆನ್ಸ್ ಸ್ಟೋರಿ..!


ಸಮಯ ಎಂಬುದು ಮನುಷ್ಯನ ಬಾಳಿನಲ್ಲಿ ಏನೆಲ್ಲ ಆಟವಾಡುತ್ತದೆ ಎಂಬುದನ್ನು ತಿಳಿಸಿ, ಆ ಮೂಲಕ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ನೀಡಲು ಮುಂದಾಗಿರುವ ಚಿತ್ರವೇ “ಕಟ್ಲೆ”. ಈಗಾಗಲೇ ಶೇಕಡಾ ೯೫ ಭಾಗ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ಗೆ ತಯಾರಿ ನಡೆಸುತ್ತಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಸಾಫ್ಟ್ ವೇರ್ ಉದ್ಯೋಗಿಗಳು ಎಲ್ಲಿಗೋ ಪ್ರವಾಸ ಹೊರಟವರು, ಮಲೆನಾಡಿ ದಟ್ಟಾರಣ್ಯದ ಗ್ರಾಮಕ್ಕೆ ಏಕೆ ಬರುತ್ತಾರೆ..? ಅಲ್ಲಿಗೆ ಬರಲು ಯಾವ ಕಾರಣ..? ವಿಧಿಯಾಟ ಬೇರೆಯೇ ಇದೆಯೇ.? ನಾಯಕನಿಗೂ ಇದಕ್ಕೂ ಸಂಬAಧ ಇದೆಯೇ..? ಎಂಬಿತ್ಯಾದಿ ವಿಷಯಗಳನ್ನೊಳಗೊಂಡು ಈ ಹಾರರ್, ಥ್ರಿಲ್ಲರ್ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.

ನಾಟಿ ವೈದ್ಯರಾಗಿರುವ ಕರಿಸುಬ್ಬು

ಕಟ್ಲೆ ಚಿತ್ರದಲ್ಲಿ ನನಗೆ ಒಂದು ವಿಭಿನ್ನ ಪಾತ್ರ ದೊರಕಿದ್ದು, ನಾನು ಇಲ್ಲಿ ನಾಟಿ ವೈದ್ಯನಾಗಿ ನಟಿಸಿದ್ದೇನೆ. ಜೊತೆಗೆ ನಾಯಕಿಯ ತಂದೆಯಾಗಿದ್ದೇನೆ. ಗುಡ್ಡಗಾಡು ಪ್ರದೇಶದಲ್ಲಿ ನನ್ನ ನಾಟಿ ವೈದ್ಯಗಾರಿಕೆ ನಡೆಯುತ್ತದೆ. ಕ್ಲೈಮ್ಯಾಕ್ಸ್ ವರೆಗೂ ಈ ಪಾತ್ರ ಮುಂದುವರಿಯುತ್ತಾ ಹೋಗುತ್ತದೆ. ಇನ್ನೊಂದು ವಿಶೇಷವೆಂದರೆ ನನ್ನ ಪಾತ್ರದ ಬಹುತೇಕ ಭಾಗವನ್ನು ರಾತ್ರಿ ಸಂದರ್ಭದಲ್ಲಿಯೇ ಚಿತ್ರೀಕರಣವಾಗಿದೆ. ಇದೊಂದು ವಿಶೇಷವಾದ ಅನುಭವವನ್ನು ಕೊಟ್ಟಿದೆ. ಶಿರಸಿಯ ಮಲೆನಾಡು ಭಾಗದಲ್ಲಿ ಚಿತ್ರೀಕರಣ ನಡೆದಿದ್ದು, ನಿರ್ದೇಶಕರಾದ ಎಸ್. ಎಸ್. ವಿಧಾ ಅವರು ಕಲಾವಿದರನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎನ್ನುತ್ತಾರೆ ನಟರಾದ ಕರಿಸುಬ್ಬು.
ಸಾಫ್ಟ್ವೇರ್ ಸ್ನೇಹಿತ ಪವನ್

ಕಟ್ಲೆ ಚಿತ್ರ ಒಂದು ಒಳ್ಳೆಯ ಪ್ರಯತ್ನವಾಗಿದ್ದು, ಸಿನಿಮಾ ಸಹ ಅತ್ಯುತ್ತಮವಾಗಿ ಮೂಡಿಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಾಯಕನಟರಾಗಿರುವ ಕೆಂಪೇಗೌಡ ಅವರೂ ಸಹ ನನ್ನ ಆತ್ಮೀಯ ಸ್ನೇಹಿತರಾಗಿದ್ದರಿಂದ ನಮಗೆ ಆಫ್ ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್‌ನಲ್ಲಿ ಯಾವುದೇ ವ್ಯತ್ಯಾಸಗಳು ಸಹ ಕಂಡುಬAದಿಲ್ಲ. ಕಥೆಗೆ ತಕ್ಕಂತೆ ಎಲ್ಲರ ನಟನೆಗಳು ಸಹ ಉತ್ತಮವಾಗಿ ಮೂಡಿಬಂದಿದೆ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾವಾಗಿದೆ. ಅಷ್ಟೇ ಅಚ್ಚುಕಟ್ಟಾಗಿ ನಿರ್ದೇಶಕರಾದ ಎಸ್.ಎಸ್.ವಿಧ ಚಿತ್ರವನ್ನು ಹೆಣೆದಿದ್ದಾರೆ. ಜೊತೆಗೆ ನನಗಾಗಲೀ, ಟೆನ್ನಿಸ್ ಕೃಷ್ಣ ಅವರಿಗಾಗಲೀ ಬಹಳ ಸ್ವಾತಂತ್ರ‍್ಯವನ್ನು ಕೊಟ್ಟಿದ್ದರು. ನಟನೆಗೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆಗಳಿಗೆ ಅವಕಾಶಗಳನ್ನು ಕೊಡುತ್ತಿದ್ದರು. ಇದು ನಮಗೆ ಇನ್ನಷ್ಟು ಸ್ಫೂರ್ತಿಯನ್ನು ತಂದುಕೊಟ್ಟಿತ್ತು ಎನ್ನುತ್ತಾರೆ ಸಹ ನಟರಾದ ಪವನ್. ಇನ್ನು ನಿರ್ಮಾಪಕರಾದ ಭರತ್ ಗೌಡ ಹೊಸಕೋಟೆ ಅವರ ಬಗ್ಗೆ ಹೇಳಬೇಕೆಂದರೆ ಅವರೊಬ್ಬ ಅತ್ಯುತ್ತಮ ವ್ಯಕ್ತಿ. ಪ್ರತಿ ಬಾರಿ ಚಿತ್ರೀಕರಣ ನಡೆಯುವಾಗ ಬರುತ್ತಿದ್ದರು, ಶಾಟ್ಸ್ಗಳನ್ನು ನೋಡುತ್ತಿದ್ದರು. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಕೆಲವು ನಟನೆಗಳಿಗೆ ಖುಷಿ ಪಡುತ್ತಿದ್ದರು. ಜೊತೆಗೆ ಅಪರೂಪದ ನಿರ್ಮಾಪಕರಲ್ಲಿ ಇವರೂ ಒಬ್ಬರು ಎಂದು ಹೇಳಬಹುದಾಗಿದ್ದು, ಶೆಡ್ಯೂಲ್‌ಗೆ ಮೊದಲೇ ಪೇಮೆಂಟ್ ಹಾಕಿಬಿಟ್ಟಿರುತ್ತಿದ್ದರು. ಮತ್ತೆ ಅವಶ್ಯಕತೆಗಳನ್ನು ತಕ್ಷಣ ಪೂರೈಸಿಬಿಡುತ್ತಿದ್ದರು ಎಂದು ಪವನ್ ಹೇಳುತ್ತಾರೆ. ಕಟ್ಲೆಯ ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದ್ದು, ಒಳ್ಳೊಳ್ಳೇ ಲೊಕೇಶನ್‌ಗಳನ್ನು ಕ್ಯಾಮರಾಮನ್ ಅವರು ಸೊಗಸಾಗಿ ಸೆರೆಹಿಡಿದ್ದಾರೆ. ಒಟ್ಟಾರೆಯಾಗಿ ನಮಗೆ ಒಂದೊಳ್ಳೆ ಅನುಭವವನ್ನು ಕೊಟ್ಟಿದೆ ಎಂದು ಅನುಭವ ಹಂಚಿಕೊAಡರು.

ಮಲೆನಾಡಿನ ಲೊಕೇಶನ್

ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಹಾಡಿನ ಭಾಗ ಮಾತ್ರ ಬಾಕಿ ಇದೆ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಶಿರಸಿಯ ಪ್ರಕೃತಿ ಸೊಬಗಿನ ಮಧ್ಯೆ ಚಿತ್ರೀಕರಣವನ್ನು ನಡೆಸಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, ಬಾಕಿ ಚಿತ್ರೀಕರಣದ ಬಳಿಕ ಶೀಘ್ರದಲ್ಲಿಯೇ ಡಬ್ಬಿಂಗ್ ಸಹಿತ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಲಿದೆ.

ಡಾಕ್ಟರ್ ಹರೀಶ್ ರಾಜ್..!

ಕಟ್ಲೆ ಚಿತ್ರದಲ್ಲಿ ನಾನು ಡಾಕ್ಟರ್ ಆಗಿದ್ದೇನೆ. ಆದರೆ, ಇಡೀ ಚಿತ್ರಕ್ಕೆ ಒಂದು ತಿರುವನ್ನು ನೀಡುವುದೇ ನನ್ನ ಪಾತ್ರವಾಗಿದೆ. ಹಾಗಾಗಿ ಇದೊಂದು ಮುಖ್ಯ ಹಾಗೂ ಜವಾಬ್ದಾರಿಯುತ ಪಾತ್ರವಾಗಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನನ್ನ ಭಾಗದ ಬಹುತೇಕ ಚಿತ್ರೀಕರಣ ನಡೆದಿದ್ದು, ಇದ್ದಷ್ಟು ದಿನವೂ ಒಳ್ಳೆಯ ಅನುಭವವನ್ನು ನೀಡಿದೆ. ನಮಗೆ ಉತ್ತಮ ಲೊಕೇಶನ್‌ಗಳು ಸಹ ಲಭಿಸಿದ್ದು, ಒಳ್ಳೆಯ ಪರಿಸರ ಚಿತ್ರಕ್ಕೆ ಇನ್ನಷ್ಟು ಪ್ಲಸ್ ಆಗಿದೆ. ಜೊತೆಗೆ ಪ್ಲಾನಿಂಗ್, ಶಾಟ್ಸ್ಗಳಿಗೂ ಸಹ ಇದು ಬಹಳವೇ ಅನುಕೂಲವಾಯಿತು. ಕೆಂಪೇಗೌಡ ನನಗೆ ಸ್ನೇಹಿತರು. ಇದನ್ನು ಹೊರಗಿಟ್ಟು ಕಲಾವಿದನಾಗಿ ನೋಡುವುದಾದರೆ, ಹೊಸ ಲುಕ್ ನಲ್ಲಿ ಅವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ ಹಳೇ ಸ್ನೇಹಿತನೊಂದಿಗೆ ಹೊಸ ಜವಾಬ್ದಾರಿಯ ಪಾತ್ರದೊಂದಿಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಚಿತ್ರವು ಉತ್ತಮವಾಗಿ ಮೂಡಿಬಂದಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.

ಹ್ಯೂಮರಸ್ ಡಾಕ್ಟರ್
ಕಟ್ಲೆಯಲ್ಲಿ ನನ್ನ ಪಾತ್ರದ ಬಗ್ಗೆ ಖಂಡಿತಾ ಖುಷಿ ಇದೆ. ವೈದ್ಯನಾಗಿ ನಿರ್ವಹಣೆ ಮಾಡುವ ಗಂಭೀರ ಪಾತ್ರದ ಜೊತೆಗೆ, ಹ್ಯೂಮರಸ್ ಆಗಿಯೂ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಹಾಗಾಗಿ ಇಲ್ಲಿ ನನ್ನ ಪಾತ್ರಕ್ಕೆ ೨ ವಿಶೇಷತೆ ಇದೆ. ಆಗಾಗ ಮಕ್ಕಳ ಜೊತೆಗೆ ಹಾಸ್ಯ ಮಾಡುವುದು, ಅಣ್ಣಾವ್ರ ಹಾಡುಗಳನ್ನು ಹಾಡುವುದು ಸೇರಿದಂತೆ ಹಳ್ಳಿಯಲ್ಲಿ ನಗುವುದು-ನಗಿಸುವುದನ್ನು ಮಾಡಿದ್ದೇನೆ. ಡಾಕ್ಟರ್ ಜೊತೆ ಜೊತೆಗೆ ಅರೆಕಾಲಿಕ ನಾಟಕಕಾರನಾಗಿಯೂ ಕಾಣಿಸಿಕೊಂಡಿದ್ದೇನೆ.

ಉತ್ತಮ ಚಿತ್ರಕ್ಕಾಗಿ ನನ್ನ ಬೆಂಬಲ; ಭರತ್ ಗೌಡ

ನಾನು ಮೊದಲು ಒಬ್ಬ ಸಿನಿಪ್ರೇಮಿ. ನಂತರ ಒಬ್ಬ ನಿರ್ಮಾಪಕ. ಹಾಗಾಗಿ ಪ್ರೇಕ್ಷಕನಾಗಿ ಸಿನಿಮಾ ಹಿಡಿಸಬೇಕೆಂದರೆ, ನಿರ್ಮಾಪಕನಾಗಿ ಅದಕ್ಕೆ ಪೂರಕವಾಗಿ ಸಹಕಾರ, ಬೆಂಬಲ ನೀಡಬೇಕೆನ್ನುವುದು ನನ್ನ ಅಭಿಮತ. ಈ ನಿಟ್ಟಿನಲ್ಲಿ ನಿರ್ದೇಶಕರಿಗೆ ಬೇಕಾದ್ದನ್ನು ನಾನು ಕೊಟ್ಟಿದ್ದೇನೆ. ಜನರ ನಿರೀಕ್ಷೆಯನ್ನು ಅವರು ಪೂರೈಸುತ್ತಾರೆಂಬ ನಂಬಿಕೆ ನನಗಿದೆ ಎಂದು ಹೇಳುತ್ತಾರೆ ಭರತ್ ಗೌಡ.

ತಾರಾಂಗಣದ ಮಾಹಿತಿ..?
ಕೆಂಪೇಗೌಡ ನಾಯಕರಾಗಿದ್ದರೆ, ಅಮೃತ ಹಾಗೂ ಶರಣ್ಯ ನಾಯಕಿಯರಿದ್ದಾರೆ. ಟೆನ್ನಿಸ್ ಕೃಷ್ಣ, ಹರೀಶ್ ರಾಜ್, ಪವನ್, ಕರಿಸುಬ್ಬು ಅವರು ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದರು. ಇನ್ನೂ ಹಲವರು ಚಿತ್ರದಲ್ಲಿದ್ದು, ಶೀಘ್ರದಲ್ಲಿಯೇ ಎಲ್ಲ ಮಾಹಿತಿಯನ್ನು ನೀಡುವುದಾಗಿ ಚಿತ್ರತಂಡ ಹೇಳಿದೆ. ಎಸ್.ಎಸ್. ವಿಧಾ ಆ್ಯಕ್ಷನ್ ಕಟ್ ಹೇಳಿದ್ದರೆ, ನಾಗೇಂದ್ರ ಪ್ರಸಾದ್ ಹಾಗೂ ಚೇತನ್ ಕುಮಾರ್ ಅವರ ಸಾಹಿತ್ಯ ರಚನೆ ಇದೆ.

ನಿರ್ಮಾಪಕ ಭರತ್ ಸಹಕಾರ
ಯಾವುದೇ ಚಿತ್ರವಿರಲಿ ಅದಕ್ಕೆ ಆರ್ಥಿಕ ಬಲ ಮುಖ್ಯವಾಗುತ್ತದೆ. ಒಂದು ಸಿನಿಮಾದಲ್ಲಿ ಯಾವುದಕ್ಕೂ ಕೊರತೆ ಇರಬಾರದು. ಅಲ್ಲಿ ಕೊರತೆಯಾದರೆ ಅದು ಪರದೆ ಮೇಲೆ ಪ್ರತಿಬಿಂಬವಾಗುತ್ತದೆ ಎಂಬ ನಿಟ್ಟಿನಲ್ಲಿ ಧಾರಾಳ ಮನಸ್ಸನ್ನು ಇಟ್ಟುಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವ ಭರತ್ ಗೌಡ ಹೊಸಕೋಟೆ ಅವರ ಸಹಕಾರಕ್ಕೆ ಚಿತ್ರತಂಡ ಕೊಂಡಾಡಿದೆ. ಭರತ್ ಗೌಡ ಅವರು ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ) ರಾಜ್ಯ ಯುವ ಅಧ್ಯಕ್ಷರಾಗಿದ್ದಾರೆ. ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸ್ಪಂದಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕಲಾವಿದರಿಗೂ ನೆರವಾಗಿದ್ದಾರೆ. ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಮಾಜಕ್ಕೆ ಒಳ್ಳೆಯ ಸಿನಿಮಾವನ್ನು ಕೊಡಬೇಕು ಎಂಬ ಸದಾಶಯವನ್ನು ಇಟ್ಟುಕೊಂಡಿದ್ದಾರೆ.

Share this post:

Translate »